ರೆಡ್‌ಕ್ರಾಸ್ ಸಂಸ್ಥೆ ಕೇಂದ್ರ ಸಮಿತಿಗೆ ಬಸ್ರೂರು ರಾಜೀವ್ ಶೆಟ್ಟಿ ಪುನರಾಯ್ಕೆ

Update: 2019-10-16 14:31 GMT

ಉಡುಪಿ, ಅ.16: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕೇಂದ್ರ ಸಮಿತಿಯ ಸದಸ್ಯರಾಗಿ ಬಸ್ರೂರು ರಾಜೀವ ಶೆಟ್ಟಿ ಅವರು ಎರಡನೇ ಬಾರಿಗೆ ಪುನರಾಯ್ಕೆ ಗೊಂಡಿದ್ದಾರೆ. ಹೊಸದಿಲ್ಲಿಯಲ್ಲಿ ಬುಧವಾರ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಎರಡು ವರ್ಗಳ ಅವಧಿಗೆ ಈ ಆಯ್ಕೆ ನಡೆಯಿತು.

ಸಭೆಯಲ್ಲಿ ಭಾರತದ ಎಲ್ಲಾ 29 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಕರ್ನಾಟಕ, ತಮಿಳುನಾಡು ಮತ್ತು ಅಂಡಮಾನ್ ನಿಕೋಬಾರ್‌ನಿಂದ ಮೂವರು ಚುನಾಯಿತರಾಗಿದ್ದು, ಇವರಲ್ಲಿ ಬಸ್ರೂರು ರಾಜೀವ್ ಶೆಟ್ಟಿ ಒಬ್ಬರು.

ಬಸ್ರೂರು ರಾಜೀವ್ ಶೆಟ್ಟಿ 2019-2022ನೇ ಸಾಲಿಗೆ ಭಾರತೀಯ ರೆಡ್‌ಕ್ರಾಸ್‌ನ ಉಡುಪಿ ಜಿಲ್ಲಾ ಘಟಕದ ಸಬಾಪತಿಯಾಗಿಯೂ ಆಯ್ಕೆಯಾಗಿ ದ್ದಾರೆ ಎಂದು ಉಡುಪಿ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News