ಪ್ರತ್ಯೇಕ ಘಟನೆ: ಇಬ್ಬರು ಯುವಕರು ನಾಪತ್ತೆ

Update: 2019-10-16 15:42 GMT
ನಿತೇಶ್, ಗಣೇಶ್

ಉಡುಪಿ, ಅ.16: ಮಣಿಪಾಲ ಅಲೆವೂರು ಗುಡ್ಡೆಯಂಗಡಿ ನಿವಾಸಿ ನಿತೇಶ್(19) ಎಂಬವರು ಅ.11ರಂದು ಕುಕ್ಕಿಕಟ್ಟೆಗೆ ಔಷಧಿ ತರಲು ಹೋದವರು ಈತನಕ ಮನೆಗೆ ಮರಳದೇ ನಾಪತ್ತೆಯಾಗಿದ್ದಾರೆ. 5 ಅಡಿ 6 ಇಂಚು ಎತ್ತರವಿರುವ ನಿತೇಶ್, ಸಪೂರ ಶರೀರ ಹೊಂದಿದ್ದು, ಕನ್ನಡ, ತುಳು ಭಾಷೆ ಬಲ್ಲರು. ಇವರು ಸಿಕ್ಕಿದಲ್ಲಿ ಮಣಿಪಾಲ ಠಾಣೆ ಅಥವಾ ಪೊಲೀಸ್ ನಿರೀಕ್ಷಕರು ಅಥವಾ ಪೊಲೀಸ್ ಉಪ ನಿರೀಕ್ಷಕರಿಗೆ ಮಾಹಿತಿ ನೀಡುವಂತೆ ಮಣಿಪಾಲ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಕುಂದಾಪುರ: ಕುಂದಾಪುರ ತಾಲೂಕು ಕೂರ್ಗಿ ಗ್ರಾಮದ ದಡ್ಡ ನರಿಕಲ್ಲು ನಿವಾಸಿ ಗಣೇಶ್ ಆಚಾರಿ (40) ಎಂಬವರು ಮರಕೆಲಸ ಮಾಡಿಕೊಂಡಿದ್ದು, ಸೆ.27ರಂದು ಕೆಲಸದ ನಿಮಿತ್ತ ಕೋಟೇಶ್ವರಕ್ಕೆ ಹೋಗುವುದಾಗಿ ಮನೆಯಿಂದ ಹೋದವರು ಮರಳಿ ಬಾರದೇ ಕಾಣೆಯಾಗಿ ದ್ದಾರೆ. 5 ಅಡಿ ಎತ್ತರವಿರುವ ಗಣೇಶ್, ಗೋಧಿ ಮೈ ಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ತಿಳಿದಿದ್ದಾರೆ. ಇವರು ಸಿಕ್ಕಿದಲ್ಲಿ ಪೊಲೀಸ್ ಉಪ ನಿರೀಕ್ಷಕರು, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ (08254-237100), ಪೊಲೀಸ್ ವೃತ್ತ ನಿರೀಕ್ಷಕರು, ಕುಂದಾಪುರ ವೃತ್ತ (08254-230880) ಅಥವಾ ಉಡುಪಿ ಕಂಟ್ರೋಲ್‌ರೂಂಗೆ(0820-2526444)ಮಾಹಿತಿ ನೀಡುವಂತೆ ಕುಂದಾಪುರ ಗ್ರಾಮಾಂತರ ಪೊಲೀ ಉಪನಿರೀಕ್ಷಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News