ಪರಿಯಾಳ ಸಮಾಜದಿಂದ ವಿದ್ಯಾರ್ಥಿವೇತನ ವಿತರಣೆ -ಪ್ರತಿಭಾ ಪುರಸ್ಕಾರ

Update: 2019-10-16 14:50 GMT

ಉಡುಪಿ, ಅ.16: ಉಡುಪಿ ಜಿಲ್ಲಾ ಪರಿಯಾಳ ಸಮಾಜ ಸುಧಾರಕ ಸಂಘದ 76ನೇ ವಾರ್ಷಿಕ ಮಹಾಸಭೆ, ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಪ್ರತಿಭಾನ್ವಿತರಿಗೆ ಸನ್ಮಾನ ಸಮಾರಂಭವನ್ನು ಮಂಗಳ ವಾರ ಉಡುಪಿ ಪುರಭವನದಲ್ಲಿ ಆಯೋಜಿಸಲಾಗಿತ್ತು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಯು.ಶಂಕರ ಸಾಲಿಯಾನ್ ಕಟಪಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಪರಿಯಾಳ ಸಮಾಜದ ಅಧ್ಯಕ್ಷ ರಮೇಶ ಬಂಗೇರಾ ಸೂಟರ್‌ಪೇಟೆ, ಮಂಗಳೂರು ಪರಿಯಾಳ ಸಂಘದ ಗೌರವ ಅಧ್ಯಕ್ಷ ಸಂಜೀವ ಬಂಗೇರಾ ಮಾರ್ನಮಿಕಟ್ಟೆ, ದ.ಕ.ಜಿಲ್ಲಾ ಪರಿಯಾಳ ಮಹಿಳಾ ಸಂಘದ ಅಧ್ಯಕ್ಷೆ ದಮಯಂತಿ ಬಂಗೇರ, ಉಡುಪಿ ಜಿಲ್ಲಾ ಪರಿಯಾಳ ಮಹಿಳಾ ಸಂಘದ ಅಧ್ಯಕ್ಷೆ ವಸಂತಿ ಭಾಸ್ಕರ್, ಕುಂದಾಪುರ ತಾಲೂಕು ಸಂಘದ ಅಧ್ಯಕ್ಷ ಮಂಜುನಾಥ ಸಾಲಿಯಾನ್ ತ್ರಾಸಿ, ಕಾರ್ಕಳ ತಾಲೂಕು ಸಂಘದ ಅಧ್ಯಕ್ಷ ಸಂಜೀವ ಸಾಲಿಯಾನ್ ಬೆಳುವಾಯಿ, ಉಳ್ಳಾಲ ವಲಯ ಸಂಘದ ಅಧ್ಯಕ್ಷ ಪ್ರಭಾಕರ ಬಂಗೇರ, ಕುಂದಾಪುರ ತಾಲೂಕು ಮಹಿಳಾ ಸಂಘದ ಅಧ್ಯಕ್ಷೆ ಸುಜಾತಾ ಮಂಜುನಾಥ್ ತ್ರಾಸಿ, ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ಜಯಂತ್ ಸುವರ್ಣ, ಗೋಪಾಲ ಸಾಲಿಯಾನ್ ಮಲ್ಪೆ, ಮೀನಾ ಜಯಂತ್ ಬಜ್ಪೆ, ಶಾರ್ಜಾ ಸವಿತಾ ಸಮಾಜದ ಮಾಜಿ ಅಧ್ಯಕ್ಷ ಸಂದೀಪ್ ಸಾಲಿಯಾನ್ ಬ್ರಹ್ಮಾವರ ಉಪಸ್ಥಿತರಿದ್ದರು.

ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು. ಸಂಘದ ಕಾರ್ಯದರ್ಶಿ ಸುಧಾಕರ ಸಾಲಿಯಾನ್, ಮಹಿಳಾ ವಿಭಾಗದ ಕಾರ್ಯದರ್ಶಿ ಪೂರ್ಣಿಮಾ ಶಶಿಧರ್ ವಾರ್ಷಿಕ ವರದಿ ವಾಚಿಸಿದರು. ಸಂಘದ ಕೋಶಾಧಿಕಾರಿ ಶೇಖರ ಸಾಲಿ ಯಾನ್ ಆದಿಉಡುಪಿ ಲೆಕ್ಕಪತ್ರ ಮಂಡಿಸಿದರು.

ಸುಜಯ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನುರಾಧಾ ಸಂತೋಷ್ ಸ್ವಾಗತಿಸಿದರು. ದಯಾನಂದ ಸುವರ್ಣ ಕಾರ್ಕಳ ಸಂದೇಶ ವಾಚನ ಮಾಡಿದರು. ರಜನಿ ಜಯಂತ್ ವಂದಿಸಿದರು. ಸತ್ಯವತಿ ನಾಗೇಶ್ ಹಾಗೂ ಪ್ರಶಾಂತ್ ಸಾಲಿಯಾನ್ ನಲ್ಲೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News