ಬಿಜೆಪಿಗೆ ಗುಡ್ಬೈ ಹೇಳಿದ ಹಿರಿಯ ನಾಯಕ ದಾಮೋದರ ರಾವುತ್
Update: 2019-10-16 15:19 GMT
ಭುವನೇಶ್ವರ,ಅ.16: ಒಡಿಶಾದ ಬಿಜೆಪುರ ವಿಧಾನಸಭಾ ಕ್ಷೇತ್ರದಲ್ಲಿ ಅ.21ರಂದು ನಡೆಯಲಿರುವ ಉಪಚುನಾವಣೆಗೆ ಮುನ್ನ ತನ್ನನ್ನು ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ಹಿರಿಯ ಬಿಜೆಪಿ ನಾಯಕ ದಾಮೋದರ ರಾವುತ್ ಅವರು ಬುಧವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾವೆುಯನ್ನು ಸಲ್ಲಿಸಿದ್ದಾರೆ.
ರಾವುತ್ ಆಡಳಿತ ಬಿಜೆಡಿಯಿಂದ ವಜಾಗೊಂಡ ಬಳಿಕ ಕಳೆದ ಮಾರ್ಚ್ನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
35 ವರ್ಷ ಒಡಿಶಾ ವಿಧಾನಸಭೆಯ ಶಾಸಕ ಮತ್ತು ಏಳು ಸಲ ಸಚಿವರಾಗಿದ್ದ ರಾವುತ್ 2019ರ ಚುನಾವಣೆಯಲ್ಲಿ ಬಲಿಕುಡಾ-ಎರಸಮಾ ಕ್ಷೇತ್ರದಿಂದ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.
ರಾವುತ್ ಅವರು ಬಿಜೆಪುರ ಉಪಚುನಾವಣೆಗೆ ಮುನ್ನ ಪಕ್ಷವನ್ನು ತೊರೆದ ಎರಡನೇ ಬಿಜೆಪಿ ನಾಯಕರಾಗಿದ್ದಾರೆ. ಇದಕ್ಕೂ ಮುನ್ನ ಮಾಜಿ ಶಾಸಕ ಅಶೋಕ ಕುಮಾರ ಪಾಣಿಗ್ರಾಹಿ ಅವರು ಬಿಜೆಪಿಯಿಂದ ಹೊರಬಂದಿದ್ದರು.