ಎಸ್‌ಕೆಪಿಎ ಅಧ್ಯಕ್ಷರಾಗಿ ಶ್ರೀಧರ್ ಶೆಟ್ಟಿಗಾರ್

Update: 2019-10-16 16:25 GMT

ಉಡುಪಿ, ಅ.16: ಸೌತ್ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಷನ್ ಇದರ ಅಧ್ಯಕ್ಷರಾಗಿ ಕರಂದಾಡಿ ಶ್ರೀಧರ್ ಶೆಟ್ಟಿಗಾರ್ ಉಡುಪಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಅಡ್ಯಾರ್, ಉಪಾಧ್ಯಕ್ಷರುಗಳಾಗಿ ದೇವರಾಜ್ ಶೆಟ್ಟಿ ಸುರತ್ಕಲ್, ನಾಗರಾಜ ರಾಯಪ್ಪನ ಮಠ ಕುಂದಾಪುರ, ಕೋಶಾಧಿಕಾರಿಯಾಗಿ ಆನಂದ ಎನ್.ಬಂಟ್ವಾಳ, ಕಾರ್ಯದರ್ಶಿಗಳಾಗಿ ಸಂತೋಷ್ ಕಾಪು, ಅಜಯ್ ಮಂಗಳೂರು, ಸಂಘಟನಾ ಕಾರ್ಯದರ್ಶಿ ಗಳಾಗಿ ಲೋಕೇಶ್ ಸುಬ್ರಮಣ್ಯ, ಸುಂದರ್ ಪೂಜಾರಿ ಕೊಳಲಗಿರಿ, ಕ್ರೀಡಾ ಕಾರ್ಯದರ್ಶಿಗಳಾಗಿ ಪ್ರಸಾದ್ ಐಸಿರ ಕಾರ್ಕಳ, ತನುಂಜಯ ರಾವ್ ಉಳ್ಳಾಲ, ಪ್ರಕಾಶ್ ಬ್ರಹ್ಮಾವರ, ಉದಯ ಮುಂಡ್ಕೂರು ಕಾಪು, ಮಾಧ್ಯಮ ಪ್ರತಿನಿಧಿಯಾಗಿ ಜನಾರ್ದನ್ ಕೊಡವೂರು, ವಿಲ್ಫ್ರೇಡ್ ಮೂಡಬಿದ್ರೆ, ಸಾರ್ವ ಜನಿಕ ಸಂಪರ್ಕಾಧಿಕಾರಿಯಾಗಿ ಪ್ರಮೋದ್ ಸುವರ್ಣ ಕಾಪು, ಹರೀಶ್ ಪುಣಚ ಪುತ್ತೂರು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಿರಣ್ ಕುಮಾರ್ ಬೆಳ್ತಂಗಡಿ, ನವೀನ್ ಕುಮಾರ್ ಕಟೀಲ್ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News