ಅಕ್ರಮ ಮರಳು ಸಾಗಾಟ: ಇಬ್ಬರ ಬಂಧನ

Update: 2019-10-16 16:28 GMT

ಕಾರ್ಕಳ, ಅ.16: ಕೌಡೂರು ಗ್ರಾಮದ ಹೆಂಡಾಲ್ ಬಳಿಯ ಹೊಳೆಯಲ್ಲಿ ಅ.15ರಂದು ಬೆಳಗ್ಗೆ ಅಕ್ರಮವಾಗಿ ಮರಳು ಸಾಗಿಸಲು ಯತ್ನಿಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.

ಕೌಡೂರು ಗ್ರಾಮದ ಅಬ್ಬೆಟ್ಟುವಿನ ವಿನ್ಸೆಂಟ್ ಡಿಸೋಜ(55) ಮೈಂದ ಲ್ಯಾಕರ್‌ನ ಗೋಪಾಲ ನಾಯ್ಕ್(34) ಬಂಧಿತ ಆರೋಪಿಗಳು. ಇವರಿಂದ ಟೆಂಪೋ, ಎರಡು ಸಾವಿರ ರೂ. ಮೌಲ್ಯದ ಮರಳು ಮತ್ತು ಇತರ ಸೊತ್ತು ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News