ಆಗುಂಬೆ- ಶಿವಮೊಗ್ಗ ಕೆಎಸ್ಸಾರ್ಟಿಸಿ ಬಸ್ ವೇಳಾಪಟ್ಟಿ

Update: 2019-10-18 16:56 GMT

ಉಡುಪಿ, ಅ.18: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಂಗಳೂರು ವಿಭಾಗ, ಉಡುಪಿ ಘಟಕದಿಂದ ಉಡುಪಿ, ಆಗುಂಬೆ ಮಾರ್ಗವಾಗಿ ಶಿವಮೊಗ್ಗಕ್ಕೆ ಮತ್ತು ಶಿವಮೊಗ್ಗದಿಂದ ಆಗುಂಬೆ ಮಾರ್ಗವಾಗಿ ಮಣಿಪಾಲ, ಉಡುಪಿಗೆ ಬಸ್ಸುಗಳು ಈ ಕೆಳಂಡ ಸಮಯದಲ್ಲಿ ಕಾರ್ಯಾಚರಿಸಲಿವೆ.

ಉಡುಪಿಯಿಂದ ಶಿವಮೊಗ್ಗ ಕಡೆಗೆ ಬೆಳಗ್ಗೆ 7, 7:15, 8:10, 9:10, 10:10, ಅಪರಾಹ್ನ 1:25, 3:15, 3:55, 4:45, 5:05 ಗಂಟೆಗೆ ಹಾಗೂ ಶಿವಮೊಗ್ಗ್ಗದಿಂದ ಆಗುಂಬೆ ಮಾರ್ಗವಾಗಿ ಮಣಿಪಾಲ, ಉಡುಪಿಗೆ ಬೆಳಗ್ಗೆ 3:15, 5:00, 6:00, 6:40, 7:30 ಅಪರಾಹ್ನ 12:20, 1:50, 3:00, 3:30, 4:10ಕ್ಕೆ ಕಾರ್ಯಾಚರಿಸಲಿವೆ.

ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮುಂಗಡ ಬುಕ್ಕಿಂಗ್ ಕಾಯ್ದಿರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಕೆಎಸ್ಸಾರ್ಟಿಸಿ ಉಡುಪಿ ಘಟಕ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News