ಪಡುವರಿ: ಮನೆ, ನಿವೇಶನ ರಹಿತರ ಸಮಾವೇಶ

Update: 2019-10-18 16:58 GMT

ಬೈಂದೂರು, ಅ.18: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿ ಯಿಂದ ಪಡುವರಿ ಗ್ರಾಮದ ಅರ್ಹ ಫಲಾನುಭವಿ ಮನೆ, ನಿವೇಶನ ರಹಿತರ ಸಮಾವೇಶವನ್ನು ಬೈಂದೂರು ಸಿಐಟಿಯು ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿತ್ತು.

ಸಮಾವೇಶವನ್ನು ಉದ್ಘಾಟಿಸಿದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಮಾತನಾಡಿ, ಪ್ರತಿಯೊಬ್ಬರ ತಲೆ ಮೇಲೊಂದು ಸೂರು ಮೂಲಭೂತ ಹಕ್ಕು ಅಂತಾರಾಷ್ಟ್ರಿಯ ಸಮುದಾಯದ ಅಂಗೀಕೃತ ವಾನ್ಯತೆ ಪಡೆದಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಸಿಐಟಿಯು ಬೈಂದೂರು ತಾಲೂಕು ಸಂಚಾಲಕ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಮಾತನಾಡಿ, ನಿವೇವನ ರಹಿತರ ಉಡುಪಿ ಡಿಸಿ ಕಚೇರಿ ಹೋರಾಟಕ್ಕೆ ಸಿಐಟಿಯು ಕಾರ್ಮಿಕ ಸಂಘ ಸಂಪೂರ್ಣ ಬೆಂಬಲ ನೀಡುವುದಾಗಿ ಎಂದು ಭರವಸೆ ನೀಡಿದರು
 ನಿವೇಶನ ರಹಿತರ ಹೋರಾಟ ಸಮಿತಿಯ ಮುಖಂಡರಾದ ಮಂಜು ಪೂಜಾರಿ, ರಾಘವೇಂದ್ರ ಉಪ್ಪುಂದ, ರೋನಿ ನಜರತ್ ಪಡುವರಿ, ನಾಗರತ್ನ ನಾಡ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News