ಇಲಿ ಮದ್ದು ತಿಂದು ವೃದ್ಧೆ ಮೃತ್ಯು

Update: 2019-10-18 17:01 GMT

ಬೈಂದೂರು, ಅ.18: ಕಿರಿಮಂಜೇಶ್ವರ ಗ್ರಾಮದ ನಾಗೂರು ಮಕ್ಕಿಮನೆ ಎಂಬಲ್ಲಿ ಅ.14ರಂದು ಎಲೆ ಅಡಿಕೆಗೆ ಸುಣ್ಣ ಎಂದು ಇಲಿ ಮದ್ದು ಹಾಕಿ ತಿಂದು ಅಸ್ವಸ್ಥಗೊಂಡಿದ್ದ ವೃದ್ಧೆಯೊಬ್ಬರು ಅ.18ರಂದು ಮೃತಪಟ್ಟಿದ್ದಾರೆ.

 ಮೃತರನ್ನು ನಾಗೂರು ಮಕ್ಕಿಮನೆಯ ಚಂದು ದೇವಾಡಿಗ (72) ಎಂದು ಗುರುತಿಸಲಾಗಿದೆ. ಇವರು ಮನೆಯಲ್ಲಿ ಎಲೆ ಅಡಿಕೆ ತಿನ್ನುವ ವೇಳೆ ಸುಣ್ಣ ವೆಂದು ತಿಳಿದು ಎಲೆ ಅಡಿಕೆ ಚೀಲದಲ್ಲಿದ್ದ ಇಲಿ ಮದ್ದನ್ನು ತಿಂದು ಅಸ್ವಸ್ಥ ಗೊಂಡಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಅವರು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News