ಸವರ್ಣದೀರ್ಘ ಸಂಧಿ ಕನ್ನಡ ಸಿನಿಮಾ ಬಿಡುಗಡೆ

Update: 2019-10-18 17:07 GMT

ಮಂಗಳೂರು: ವೀರು ಟಾಕೀಸ್ ಹಾಗೂ ಶೈಲಾಕ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ನಿರ್ಮಾಣಗೊಂಡ ಸವರ್ಣದೀರ್ಘ ಸಂಕ್ಷಿ ಕನ್ನಡ ಸಿನಿಮಾದ ಬಿಡುಗಡೆ ಸಮಾರಂಭ ಶುಕ್ರವಾರ ಮಂಗಳೂರಿನ ಬಿಗ್ ಸಿನಿಮಾಸ್‌ನಲ್ಲಿ ಶುಕ್ರವಾರ ನಡೆಯಿತು.

ನಟ ನವೀನ್ ಡಿ.ಪಡೀಲ್ ಸಿನಿಮಾ ಬಿಡುಗಡೆಗೊಳಿಸಿ ಮಾತನಾಡಿ, ತುಳುನಾಡಿನ ಯಶಸ್ವಿ ನಿರ್ದೇಶಕ ಪ್ರಥಮ ಬಾರಿಗೆ ಕನ್ನಡದಲ್ಲಿ ವಿಭಿನ್ನ ರೀತಿಯ ಚಿತ್ರವನ್ನು ರಚಿಸಿ ನಿರ್ದೇಶಿಸಿzರೆ. ಹೊಸತನದಿಂದ ಕೂಡಿರುವ ಈ ಸಿನಿಮಾ ಸಿನಿಪ್ರೇಮಿಗಳ ಮನಗೆದ್ದು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ನಟ ಭೋಜರಾಜ್ ವಾಮಂಜೂರು ಮಾತನಾಡಿ, ಆರಂಭದಿಂದ ಅಂತ್ಯದವರೆಗೂ ವೈಶಿಷ್ಟ್ಯ ಹೊಂದಿರುವ ಚಿತ್ರ ಇದಾಗಿದೆ. ಯುವಕಲಾವಿದ ವಿರೇಂದ್ರ ಶೆಟ್ಟಿಯ ಕಲ್ಪನೆಯಲ್ಲಿ ಮೂಡಿದ ಸಿನಿಮಾ ಖಂಡಿತ ಜನಮನ ಗೆಲ್ಲುತ್ತದೆ ಎಂದರು.

ನ್ಯಾಯವಾದಿ ಅರುಣ್ ಬಂಗೇರ ಶುಭ ಹಾರೈಸಿದರು. ನಿರ್ಮಾಪಕ ಲೂಷಿಂಗ್ಟನ್ ಥಾಮಸ್, ಹಿರಿಯ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಬಿಗ್ ಸಿನಿಮಾಸ್ ಬಾಲಕೃಷ್ಣ ಶೆಟ್ಟಿ, ನಟರಾದ ಸುರೇಂದ್ರ ಬಂಟ್ವಾಳ, ಗಿರೀಶ್ ಶೆಟ್ಟಿ, ತಾರಾಕ್ಷಿ ವೀರೇಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ಬಿ.ರವೀಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News