ತಂಡಗಳ ನಡುವೆ ಹೊಡೆದಾಟ: ದೂರು ದಾಖಲು

Update: 2019-10-18 17:18 GMT

ಬಂಟ್ವಾಳ : ಊರಿನ ವಿಚಾರವಾಗಿ ಇತ್ತಂಡಗಳ ನಡುವೆ ಹೊಡೆದಾಟ ನಡೆದ ಘಟನೆ ಬಿ.ಸಿ.ರೋಡಿನ ವೈನ್ ಶಾಪ್ ವೊಂದರಲ್ಲಿ ಗುರುವಾರ ರಾತ್ರಿ ನಡೆದಿದ್ದು,  ಶುಕ್ರವಾರದಂದು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಿ.ಸಿ.ರೋಡಿನ ಸರ್ವೀಸ್ ರಸ್ತೆಯಲ್ಲಿರುವ ವೈನ್ ಶಾಪ್ ವೊಂದರಲ್ಲಿ ಬಿ.ಸಿ.ರೋಡಿನ ತಂಡ ಮತ್ತು ಮಂಗಳೂರು ತಂಡದ ನಡುವೆ ಊರಿನ ವಿಚಾರದಲ್ಲಿ ಮಾತಿಗೆ ಮಾತು ಬೆಳೆದಿದೆ. ಬಳಿಕ ಕುಡಿತದ ಮತ್ತಿನಲ್ಲಿ ಮದ್ಯದ  ಬಾಟಲಿಯಲ್ಲಿ ಇತ್ತಂಡ ಹೊಡೆದಾಡಿಕೊಂಡಿದೆ. ಬಳಿಕ ಗಾಯಗೊಂಡ ಮಂಗಳೂರು ತಂಡದವರು ಆಸ್ಪತ್ರೆಗೆ ದಾಖಲಾಗಿದ್ದರು.‌

ಬಿ.ಸಿ.ರೋಡಿನ ಶಶಿ ಮತ್ತು  ತಂಡ  ತನ್ನ ಮತ್ತು ಸ್ನೇಹಿತರ ಮೇಲೆ ಬಿಯರ್ ಬಾಟಲಿಯಲ್ಲಿ ಹಲ್ಲೆ ನಡೆಸಿದೆ ಎಂದು ಗಾಯಾಳು ವಿದ್ಯಾತ್ ಶೆಟ್ಟಿ ಎಂಬವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News