ಹಣ ದ್ವಿಗುಣ ಸ್ಕೀಮ್: ಲಕ್ಷಾಂತರ ರೂ. ಮೋಸ
Update: 2019-10-19 16:20 GMT
ಶಂಕರನಾರಾಯಣ, ಅ.19: ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಮೋಸ ಮಾಡಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳೂರು 74 ಗ್ರಾಮದ ಕಿರಣ್ ಜಿ.(28) ಎಂಬವರಿಗೆ ವಿರೇಶ್ ಕುಮಾರ್, ಕಿಶೋರ್ ಡಾಕ್ರೆ, ರವಿತೇಜ, ರವಿರಾಜ, ಗಣೇಶ್ ಎಂಬವರು ಜಸ್ಟ್ ಇನ್ ಡೀಲ್ ಎಂಬ ಒನ್ ಪರ್ಸನ್ ಕಂಪೆನಿಯ ಬಗ್ಗೆ ಮಾಹಿತಿ ನೀಡಿ, ಅದರಲ್ಲಿ ಹಣ ಹೂಡಿದರೆ ದ್ವಿಗುಣ ಹಣ ಸಿಗುವುದಾಗಿ ನಂಬಿಸಿದ್ದರು.
ಅದರಂತೆ ಕಿರಣ್ ಜಿ. 3.99ಲಕ್ಷ ರೂ. ಹಣವನ್ನು ಸಂಗ್ರಹಿಸಿ ಆ ಕಂಪೆನಿ ಯಲ್ಲಿ ಹಣ ಹೂಡಿದ್ದರು. ಆದರೆ ಆರೋಪಿಗಳು ಹಣವನ್ನು ಕಿರಣ್ ಅವರಿಗೆ ಹಿಂದಿರುಗಿಸದೆ ಆರ್ಥಿಕ ನಷ್ಟವನ್ನುಂಟು ಮಾಡಿ ೋಸ ಮಾಡಿರುವುದಾಗಿ ದೂರಲಾಗಿದೆ.