ಕೋಟ: ಎತ್ತು ತಿವಿದು ಕೃಷಿಕ ಮೃತ್ಯು

Update: 2019-10-19 16:20 GMT

ಕೋಟ, ಅ.19: ಮನೆಯ ಕೊಟ್ಟಿಗೆಯಲ್ಲಿದ್ದ ಎತ್ತು ಎದೆಗೆ ತಿವಿದ ಪರಿಣಾಮ ಕೃಷಿಕರೊಬ್ಬರು ಮೃತಪಟ್ಟ ಘಟನೆ ಅ.18ರಂದು ಬೆಳಗ್ಗೆ ಬೇಳೂರಿನ ಗುಳ್ಳಾಡಿ ಎಂಬಲ್ಲಿ ನಡೆದಿದೆ.

ಮೃತರನ್ನು ಗುಳ್ಳಾಡಿಯ ಪದ್ಮನಾಭ ಆಚಾರ್ಯ(70) ಎಂದು ಗುರುತಿಸ ಲಾಗಿದೆ. ಇವರು ಮನೆಯ ಕೊಟ್ಟಿಗೆಯಲ್ಲಿದ್ದ ಎತ್ತನ್ನು ಕೃಷಿ ಕೆಲಸಕ್ಕೆಂದು ಕರೆದುಕೊಂಡು ಹೋಗುವಾಗ ಕೊಟ್ಟಿಗೆಯ ಬಳಿ ಎತ್ತು ಏಕಾಏಕಿಯಾಗಿ ಪದ್ಮನಾಭ ಆಚಾರ್ಯರ ಎದೆಗೆ ತಿವಿದು ಗಾಯಗೊಳಿಸಿತ್ತೆನ್ನಲಾಗಿದೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News