ಬೆಳ್ತಂಗಡಿ: ಮರ ಕಳವು ಆರೋಪ ; ಮೂವರು ಸೆರೆ

Update: 2019-10-19 16:31 GMT

ಬೆಳ್ತಂಗಡಿ: ಕುಖ್ಯಾತ ಮರ ಕಳ್ಳರ ತಂಡವೊಂದರ ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು 3 ಲಕ್ಷ ರೂ. ಬೆಲೆಬಾಳುವ ಮರ ಹಾಗೂ ವಾಹನವನ್ನು ವಶಪಡಿಸಿಕೊಂಡಿರುವುದಾಗಿ ಬೆಳ್ತಂಗಡಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಆರೋಪಿಗಳು ಕೋಟೆಕಾರು ನಿವಾಸಿ ಅಬ್ಬಾಸ್ (46), ಕಕ್ಕಿಂಜೆ ಗಾಂಧೀನಗರ ನಿವಾಸಿ ಮಹಮ್ಮದ್ ಸೂಫಿ (34) ಹಾಗೂ ಗುಂಡ್ಯ ನಿವಾಸಿ ಸುರೇಶ (36) ಎಂದು ಗುರುತಿಸಲಾಗಿದೆ. ಇವರೊಂದಿಗಿದ್ದ ಕೌಕ್ರಾಡಿ ಹೊಸಮಜಲು ನಿವಾಸಿ ಮಹಮ್ಮದ್ ಬಾವ ಎಂಬಾತ  ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರೋಪಿಗಳು ಅರಣ್ಯದಿಂದ ಬೀಟೆ ಹಾಗೂ ಸಾಗುವಾನಿ ಮರಗಳನ್ನು ಕಡಿದು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳ್ತಂಗಡಿ ಅರಣ್ಯ ಇಲಾಖೆಯವರು ಶನಿವಾರ ಬೆಳಗ್ಗಿನ ಜಾವ ಧರ್ಮಸ್ಥಳ ಸಮೀಪ ಪುದುವೆಟ್ಟು ಕ್ರಾಸ್ ನಲ್ಲಿ ಕಾದು ಕುಳಿತು ಆರೋಪಿಗಳನ್ನು ಬಂದಿಸಿದ್ದಾರೆ. ಆರೋಪಿಗಳು ಟಾಟಾ ಸಿಯಾರೋ ಕಾರಿನಲ್ಲಿ ಮರವನ್ನು ಸಾಗಾಟ ಮಾಡುತ್ತಿದ್ದರು. ವಾಹನವನ್ನು ವಶಕ್ಕೆ ಪಡಯಲಾಗಿದ್ದು ಇವರಿಂದ 5 ಸಾಗುವಾನಿ ಮರದ ತುಂಡುಗಳನ್ನು, ಐದು ಬೀಟೆ ಮರದ ತುಂಡುಗಳ ಎರಡು ಗರಗಸಗಳು, ಕತ್ತಿ ಹಾಗೂ ಹಗ್ಗವನ್ನು ಹಾಗೂ ಇವರು ಉಪಯೋಗಿಸಿದ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News