ತೆಲಂಗಾಣ ಶಾಸಕ ಎಸ್.ಆರ್. ರೆಡ್ಡಿ ಪೊಳಲಿ ದೇವಳಕ್ಕೆ ಭೇಟಿ
Update: 2019-10-21 13:08 GMT
ಬಂಟ್ವಾಳ, ಅ. 21: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ತೆಲಂಗಾಣದ ನಾರಾಯಣ್ಪೇಟದ ಶಾಸಕ ಎಸ್. ಆರ್. ರೆಡ್ಡಿ ಅವರು ಕುಟುಂಬ ಸಮೇತರಾಗಿ ಪೊಳಲಿ ದೇವಳಕ್ಕೆ ಸೋಮವಾರ ಭೇಟಿ ನೀಡಿ, ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ದೇವಳದ ಅರ್ಚಕ ಪರಮೇಶ್ವರ ಭಟ್ ಪ್ರಸಾದ ನೀಡಿದರು.
ರಾಯಚೂರು ನವೋದಯ ಮೆಡಿಕಲ್ ಕಾಲೇಜು ಚೇರ್ಮೆನ್, ಶಾಸಕ ಎಸ್ ಆರ್ ರೆಡ್ಡಿ ಅವರೊಂದಿಗೆ ಅವರ ಪತ್ನಿ ಸ್ವಾತಿ ರೆಡ್ಡಿ, ಮಗ ಅಮೃತ್ ರೆಡ್ಡಿ ಹಾಗೂ ಮೋಹನ್ ರೆಡ್ಡಿ, ಜಯರಾಜ್, ಬಸವರಾಜ್ ಇದ್ದರು.