ಅ.22ರಂದು ಬ್ಯಾಂಕ್‌ಗಳಿಂದ ದೇಶವ್ಯಾಪಿ ಮುಷ್ಕರ

Update: 2019-10-21 13:19 GMT

ಉಡುಪಿ, ಅ.21: ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಹಾಗೂ ಬಿಇಎಫ್‌ಐ ಸಂಘಟನೆಗಳು ಅ.22ರ ಮಂಗಳವಾರ ಬ್ಯಾಂಕುಗಳ ದೇಶವ್ಯಾಪಿ ಮುಷ್ಕರಕ್ಕೆ ಕರೆ ಕೊಟ್ಟಿವೆ.

ಬ್ಯಾಂಕುಗಳ ವಿಲೀನಿಕರಣ ವಿರುದ್ಧ ಹಾಗೂ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬ್ಯಾಂಕ್ ನೌಕರರು ಮಂಗಳವಾರ ದೇಶದಾದ್ಯಂತ ಒಂದು ದಿನ ಮುಷ್ಕರವನ್ನು ನಡೆಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಉಡುಪಿ ಕಾರ್ಪೊರೇಶನ್ ಬ್ಯಾಂಕಿನ ವಲಯ ಕಛೇರಿಯ ಬಳಿ ನಾಳೆ ಅ.22ರ ಬೆಳಗ್ಗೆ 10:15ಕ್ಕೆ ಬ್ಯಾಂಕ್ ನೌಕರರ ಪ್ರತಿಭಟನಾ ಸಭೆ ಯನ್ನು ಹಮ್ಮಿಕೊಳ್ಳಲಾಗಿದೆ. ಬ್ಯಾಂಕ್ ಸಿಬ್ಬಂದಿಗಳು ಅಧಿಕ ಸಂಖ್ಯೆಯಲ್ಲಿ ಈ ಪ್ರತಿಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಉಡುಪಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ವಕ್ತಾರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News