ಶಂಕರನಾರಾಯಣ: ಬೈಕಿನಿಂದ ಬಿದ್ದು ಮಹಿಳೆ ಮೃತ್ಯು
Update: 2019-10-21 15:40 GMT
ಶಂಕರನಾರಾಯಣ, ಅ.21: ಚಲಿಸುತ್ತಿದ್ದ ಬೈಕಿನಿಂದ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸಿದ್ದಾಪುರ ಗ್ರಾಮದ ಬಡಾಬಾಳು ಎಂಬಲ್ಲಿ ಅ.20ರಂದು ಸಂಜೆ 7ಗಂಟೆ ಸುಮಾರಿಗೆ ನಡೆದಿದೆ.
ಚಂದ್ರ ಎಂಬವರು ತನ್ನ ಬೈಕಿನಲ್ಲಿ ಲಲಿತಾ ಅವರನ್ನು ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ಮೂಡುಬಗೆ ಕಡೆಯಿಂದ ಹೊಸಂಗಡಿ ಕಡೆಗೆ ಹೋಗುತ್ತಿದ್ದರೆನ್ನಲಾಗಿದೆ. ಆಗ ಚಂದ್ರ ಬೈಕನ್ನು ಒಮ್ಮೆಲೇ ತಿರುಗಿಸಿದಾಗ ಲಲಿತಾ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದರು. ಗಂಭೀರವಾಗಿ ಗಾಯಗೊಂಡ ಅವರು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.