​ರಸ್ತೆ ಅಪಘಾತ: ಹಸುಗೂಸು ಸಹಿತ ಮೂವರಿಗೆ ಗಾಯ

Update: 2019-10-21 15:48 GMT

ಕುಂದಾಪುರ, ಅ.21: ಹೆಮ್ಮಾಡಿ ಗ್ರಾಮದ ಕಾಶಿಮಠದ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬೆಳಗ್ಗೆ 10:15ರ ಸುಮಾರಿಗೆ ಎರಡು ಕಾರುಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಹಸುಗೂಸು ಸೇರಿದಂತೆ ಮೂವರು ಗಾಯಗೊಂಡ ಬಗ್ಗೆ ವರದಿಯಾಗಿದೆ.

ಭಟ್ಕಳ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಮುಹಮ್ಮದ್ ನೌಫಾಲ್ ಸಿದಿಕ್ ಎಂಬವರ ಕಾರು ಎದುರಿನಲ್ಲಿ ಹೋಗುತ್ತಿದ್ದ ವಾಹನವನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಬರುತ್ತಿದ್ದ ನಾಗರಾಜ್ ಎಂಬವರ ಕಾರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರಿಂದ ನಾಗರಾಜ್, ಅವರ ಪತ್ನಿ ಶಿಲ್ಪಾ ಹಾಗೂ ಅವರ 4 ತಿಂಗಳ ಮಗು ಅನ್ವಿತಾ ಗಾಯಗೊಂಡಿದ್ದು, ಇವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News