ಮಂಗಳೂರು: ಪಶ್ಚಿಮ ವಲಯ ವ್ಯಾಪ್ತಿಯ ಪಿಎಸ್ಸೈಗಳ ವರ್ಗಾವಣೆ

Update: 2019-10-23 16:06 GMT

ಮಂಗಳೂರು, ಅ.23: ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕರ ವ್ಯಾಪ್ತಿಯಲ್ಲಿ ವಿವಿಧ ಠಾಣೆಗಳ ಉಪನಿರೀಕ್ಷಕರನ್ನು ವರ್ಗಾವಣೆಗೊಳಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಐಜಿಪಿ ಅರುಣ್ ಚಕ್ರವರ್ತಿ ಬುಧವಾರ ಆದೇಶ ಹೊರಡಿಸಿದ್ದಾರೆ.

ಪಿಎಸ್ಸೈ ಅವಿನಾಶ್ ಧರ್ಮಸ್ಥಳ ಠಾಣೆಯಿಂದ ಬಂಟ್ವಾಳ ನಗರ ಠಾಣೆಗೆ, ಈರಯ್ಯ ಬೆಳ್ಳಾರೆ ಠಾಣೆಯಿಂದ ಉಪ್ಪಿನಂಗಡಿ ಠಾಣೆಗೆ, ಎಂ.ವಿ.ಚೆಲುವಯ್ಯ ಪುತ್ತೂರು ನಗರ ಠಾಣೆಯಿಂದ ಪುತ್ತೂರು ಸಂಚಾರ ಠಾಣೆಗೆ, ಲೋಲಾಕ್ಷ ಕೆ. ಮೆಸ್ಕಾಂ ಜಾಗೃತ ದಳದಿಂದ ವೇಣೂರು ಠಾಣೆಗೆ, ಓಡಿಯಪ್ಪ ಗೌಡ ಬೆಳ್ತಂಗಡಿ ಸಂಚಾರ ಠಾಣೆಯಿಂದ ಧರ್ಮಸ್ಥಳ ಠಾಣೆಗೆ, ನಂದಕುಮಾರ್ ಎಂ.ಎಂ. ಉಪ್ಪಿನಂಗಡಿ ಠಾಣೆಯಿಂದ ಬೆಳ್ತಂಗಡಿ ಠಾಣೆಗೆ, ಸುಧಾಕರ ತೋನ್ಸೆ ಬಂಟ್ವಾಳ ನಗರ ಠಾಣೆಯಿಂದ ಹಿರಿಯಡ್ಕ ಠಾಣೆಗೆ, ಯಲ್ಲಪ್ಪ ಎಸ್. ವಿಟ್ಲ ಠಾಣೆಯಿಂದ ದಾಂಡೇಲಿ ನಗರ ಠಾಣೆಗೆ, ಮಂಜುಳ ಕೆ.ಎಂ. ಡಿಎಸ್‌ಬಿ ಘಟಕದಿಂದ ಬಂಟ್ವಾಳ ಸಂಚಾರ ಠಾಣೆಗೆ, ಸುದರ್ಶನ್ ಬಿ.ಎನ್. ಅಮಾಸೆಬೈಲ್ ಠಾಣೆಯಿಂದ ಕುಂದಾಪುರ ಸಂಚಾರ ಠಾಣೆಗೆ, ಶ್ರೀಧರ್ ನಾಯ್ಕಾ ಕುಂದಾಪುರ ಗ್ರಾಮಾಂತರ ಠಾಣೆಯಿಂದ ಶಂಕರನಾರಾಯಣ ಠಾಣೆಗೆ, ಶೇಖರ ಸಿಎಸ್‌ಪಿ ಹೆಜಮಾಡಿ ಠಾಣೆಯಿಂದ ಉಡುಪಿ ಸಂಚಾರ ಠಾಣೆಗೆ, ನಂಜ ನಾಯ್ಕಾ ಕಾರ್ಕಳ ನಗರ ಠಾಣೆಯಿಂದ ಶಿರಸಿ ಗ್ರಾಮಾಂತರ, ಮಧು ಬಿ.ಇ. ಮಲ್ಪೆ ಠಾಣೆಯಿಂದ ಬೈಂದೂರು ಠಾಣೆಗೆ, ತಿಮ್ಮೇಶ್ ಬಿ.ಎನ್. ಬೈಂದೂರುನಿಂದ ಕಾರ್ಕಳ ನಗರ, ನೀತು ಗುಡೆ ಮಂಕಿ ಠಾಣೆಯಿಂದ ಮಲ್ಪೆ ಠಾಣೆಗೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News