ಉಡುಪಿ ಜಿಲ್ಲೆಯಲ್ಲಿ ಉಪಮುಖ್ಯಮಂತ್ರಿ ಪ್ರವಾಸ

Update: 2019-10-23 16:11 GMT

ಉಡುಪಿ, ಅ. 23: ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಡಾ.ಅಶ್ವಥ್ ನಾರಾಯಣ ಸಿ.ಎನ್ ಅವರು ಅ. 25ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಬೆಳಗ್ಗೆ 10ಕ್ಕೆ ಮಣಿಪಾಲದ ಫಾರ್ಚುನ್ ಇನ್ ವ್ಯಾಲಿವ್ಯೆ ಹೊಟೇಲಿನ ಚೈತ್ಯಹಾಲ್‌ನಲ್ಲಿ ನಡೆಯುವ ಮಾಹೆ-ಕರ್ನಾಟಕ ಸರಕಾರದ ಮಣಿಪಾಲ ಬಯೋ ಇನ್‌ಕ್ಯುಬೇಟರ್ ಸೆಂಟರ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಚಿವರು ಬಳಿಕ 10:45ಕ್ಕೆ ಶ್ರೀಕೃಷ್ಣ ದೇವಸ್ಥಾನ ಭೇಟಿ, 11:15ಕ್ಕೆ ಉಡುಪಿ ಬಿಜೆಪಿ ಕಚೇರಿ ಭೇಟಿ ನೀಡಿದ ನಂತರ ಮಂಗಳೂರಿಗೆ ತೆರಳುವರು.

ಮೀನುಗಾರಿಕಾ ಸಚಿವರ ಪ್ರವಾಸ: ರಾಜ್ಯ ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅ. 24ರಂದು ಬೆಳಗ್ಗೆ 9:30ಕ್ಕೆ ಉಡುಪಿಯಲ್ಲಿ ಗಾಂಧಿ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸುವರು. ಅಪರಾಹ್ನ 2ಕ್ಕೆ ಉಡುಪಿ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಜಿಲ್ಲಾ ಪ್ರಮುಖರ ಸಭೆಯಲ್ಲಿ ಭಾಗವಹಿಸಿದ ನಂತರ ಕೋಟದಲ್ಲಿ ವಾಸ್ತವ್ಯ ಮಾಡುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News