ಡಾ.ಕುಲಾಲ್‌ಗೆ ಐಎಂಎ ರಾಜ್ಯ ವಿಶಿಷ್ಟ ಪ್ರಶಸ್ತಿ

Update: 2019-10-23 16:46 GMT

ಮಂಗಳೂರು, ಅ.23: ವೈದ್ಯಕೀಯ ರಂಗದಲ್ಲಿದ್ದುಕೊಂಡು ಕನ್ನಡ ಸಾಹಿತ್ಯ ಸೇವೆ ಮಾಡಿದ ಡಾ.ಎಂ.ಅಣ್ಣಯ್ಯ ಕುಲಾಲ್ ಅವರಿಗೆ ಚಾಮರಾಜನಗರ ಮೆಡಿಕಲ್ ಕಾಲೇಜಿನಲ್ಲಿ ಇತ್ತೀಚೆಗೆ ಜರುಗಿದ 85ನೇ ರಾಜ್ಯ ಸಮ್ಮೇಳನದಲ್ಲಿ ‘ಐಎಂಎ ರಾಜ್ಯ ವಿಶಿಷ್ಟ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಮಂಗಳೂರು ಐಎಂಎ ಶಾಖೆಯ ಮೂಲಕ ಚೊಚ್ಚಲ ಕನ್ನಡ ವೈದ್ಯ ಬರಹಗಾರರ ಸಮ್ಮೇಳನವನ್ನು ಆಯೋಜಿಸಿ ಯಶಸ್ಸು ಕಂಡಿದ್ದರು. ಸಮ್ಮೇಳನದಲ್ಲಿ ರಾಜ್ಯದಾದ್ಯಂತ 200ಕ್ಕೂ ಹೆಚ್ಚು ವೈದ್ಯರು ಅದರಲ್ಲಿ ಭಾಗವಹಿಸುವಂತೆ ಸಂಘಟಿಸಿದ್ದಕ್ಕಾಗಿ ವೈದ್ಯ ಬರಹಗಾರರ ಬಳಗದ ರಾಜ್ಯ ಸಂಚಾಲಕ ಡಾ.ಎಂ.ಅಣ್ಣಯ್ಯ ಕುಲಾಲ್ ಅವರು ಐಎಂಎ ರಾಜ್ಯ ವಿಶಿಷ್ಟ ಪ್ರಶಸ್ತಿಗೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News