ಮಂಗಳೂರು: ವ್ಯಕ್ತಿ ಕುಸಿದು ಮೃತ್ಯು

Update: 2019-10-25 16:27 GMT

ಮಂಗಳೂರ, ಅ.25: ನಗರದ ಮಣ್ಣಗುಡ್ಡೆಯ ವೇರ್‌ಹೌಸ್ ಸಮೀಪದ ಫ್ಲ್ಯಾಟ್ ನಿವಾಸಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಣ್ಣಗುಡ್ಡೆ ನಿವಾಸಿ ಕೃಷ್ಣಮೂರ್ತಿ (79) ಮೃತಪಟ್ಟವರು.

ಮೂಲತಃ ಮಂಗಳೂರಿನವರಾದ ಇವರು ಹಲವು ಸಮಯಗಳಿಂದ ಬೆಂಗಳೂರಿನಲ್ಲಿ ಕುಟುಂಬದ ಸಮೇತರಾಗಿ ವಾಸಿಸುತ್ತಿದ್ದರು. ತಿಂಗಳಿಗೆ ಒಂದೆರಡು ಬಾರಿ ಮಂಗಳೂರಿಗೆ ಬಂದು ಫ್ಲ್ಯಾಟ್‌ನಲ್ಲಿ ಉಳಿದುಕೊಳ್ಳುತ್ತಿದ್ದರು. ಬೆಂಗಳೂರಿನಿಂದ ಆಗಮಿಸಿದ ಇವರು  ಫ್ಲ್ಯಾಟ್‌ ನಲ್ಲಿದ್ದರು.

ಶುಕ್ರವಾರ ಮನೆಯವರು ಮೊಬೈಲ್‌ಗೆ ಕರೆ ಮಾಡಿದಾಗ ಯಾವುದೇ ಸ್ಪಂದನೆ ಸಿಗಲಿಲ್ಲ. ಕೂಡಲೇ ಮನೆಯವರು ಸಂಬಂಧಿಕರಿಗೆ ವಿಷಯ ತಿಳಿಸಿದ್ದು, ಅವರು ಬರ್ಕೆ ಠಾಣೆಗೆ ಬಂದು ವಿಷಯ ತಿಳಿಸಿದ್ದಾರೆ. ಪೊಲೀಸರು  ಫ್ಲ್ಯಾಟ್‌ ಗೆ ತೆರಳಿ ಪರಿಶೀಲನೆ ನಡೆಸಿದಾಗ  ಫ್ಲ್ಯಾಟ್‌ ಗೆ ಚಿಲಕ ಹಾಕಲಾಗಿದ್ದು, ಅದನ್ನು ಮುರಿದು ಒಳಪ್ರವೇಶಿಸಿದಾಗ ಕೃಷ್ಣಮೂರ್ತಿಯವರು ಕುಸಿದು ಬಿದ್ದ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಪರಿಶೀಲನೆ ನಡೆಸಿದ ವೈದ್ಯರು ಕೃಷ್ಣಮೂರ್ತಿಯವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ಬರ್ಕೆ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News