ಹರ್ಯಾಣದಲ್ಲಿ ಬಿಜೆಪಿ ಕಾಂಡಾ ಬೆಂಬಲ ಪಡೆಯುವುದಿಲ್ಲ: ರವಿಶಂಕರ್ ಪ್ರಸಾದ್

Update: 2019-10-26 14:28 GMT

ಚಂಡಿಗಡ, ಅ.26: ಬಿಜೆಪಿಯು ಹರ್ಯಾಣದಲ್ಲಿ ಸರಕಾರ ರಚನೆಗೆ ವಿವಾದಿತ ರಾಜಕಾರಣಿ,ಹರ್ಯಾಣ ಲೋಕಹಿತ ಪಾರ್ಟಿಯ ಶಾಸಕ ಗೋಪಾಲ ಕಾಂಡಾ ಅವರ ಬೆಂಬಲವನ್ನು ಪಡೆಯುವುದಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ ಅವರು ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

 ಕಾಂಡಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಎರಡು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಬಿಜೆಪಿಗೆ ಷರತ್ತುರಹಿತ ಬೆಂಬಲವನ್ನು ನೀಡಲು ತಾನು ನಿರ್ಧರಿಸಿರುವುದಾಗಿ ಕಾಂಡಾ ಶುಕ್ರವಾರ ಪ್ರಕಟಿಸಿದ ಬಳಿಕ ಕಾಂಗ್ರೆಸ್ ಬಿಜೆಪಿಯನ್ನು ಕಟುವಾಗಿ ಟೀಕಿಸಿತ್ತು.

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಬಿಜೆಪಿಯ ಹಿರಿಯ ನಾಯಕಿ ಉಮಾಭಾರತಿ ಅವರು,ಹರ್ಯಾಣದಲ್ಲಿ ಸರಕಾರ ರಚನೆಗೆ ಕಾಂಡಾ ಬೆಂಬಲ ಪಡೆದುಕೊಂಡರೆ ಅದು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರ ಸ್ವಚ್ಛ ವ್ಯಕ್ತಿತ್ವಕ್ಕೆ ಹಾನಿಯನ್ನುಂಟು ಮಾಡಬಹುದು ಎಂದು ಟ್ವೀಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News