ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಬಿಡುಗಡೆಗೆ ಆಗ್ರಹಿಸಿ ನಳಿನಿಯಿಂದ ಉಪವಾಸ ಮುಷ್ಕರ

Update: 2019-10-26 15:23 GMT

ಚೆನ್ನೈ, ಅ. 26: ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿಯಾಗಿ ಕಳೆದ 28 ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿರುವ ಎಸ್. ನಳಿನಿ ಶ್ರೀಹರನ್ ತನ್ನನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ವೆಳ್ಳೂರು ಮಹಿಳಾ ಕಾರಾಗೃಹದಲ್ಲಿ ಉಪವಾಸ ಮುಷ್ಕರ ನಡೆಸಿದ್ದಾಳೆ.

ಕಾರಾಗೃಹದ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ನಳಿನಿ, ಶುಕ್ರವಾರದಿಂದ ಶನಿವಾರದ ವರೆಗೆ ಉಪವಾಸ ಮುಷ್ಕರ ನಡೆಸುವ ಬಗ್ಗೆ ಮಾಹಿತಿ ನೀಡಿದ್ದಳು.

ತಾನು ಹಾಗೂ ತನ್ನ ಪತಿಯಾದ ವಿ. ಶ್ರೀಹರನ್ ಆಲಿಯಾಸ್ ಮುರುಗನ್ ಕಳೆದ 28 ವರ್ಷಗಳಿಂದ ಕಾರಾಗೃಹದಲ್ಲಿ ಇದ್ದೇವೆ. ತಮ್ಮನ್ನು ಬಿಡುಗಡೆಗೊಳಿಸಬೇಕು ಎಂದು ಪತ್ರದಲ್ಲಿ ಆಕೆ ಆಗ್ರಹಿಸಿದ್ದಾಳೆ.

ಅವಧಿ ಪೂರ್ವ ಬಿಡುಗಡೆಗೆ ಆಗ್ರಹಿಸಿ ಕೂಡ ಅವರು ಹಲವು ಮನವಿಗಳನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದಳು. ಇತ್ತೀಚೆಗೆ ನಳಿನಿ ಆಕೆಯ ಪುತ್ರಿಯ ವಿವಾಹ ಸಿದ್ಧತೆ ಹಿನ್ನೆಲೆಯಲ್ಲಿ ಪರೋಲ್‌ನಲ್ಲಿ ಬಿಡುಗಡೆಗೊಂಡಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News