ಹೊಟ್ಟೆನೋವು, ಇತರ ಅನಾರೋಗ್ಯಗಳಿಂದ ಬಳಲುತ್ತಿರುವ ಚಿದಂಬರಂ ಏಮ್ಸ್ ಆಸ್ಪತ್ರೆಗೆ

Update: 2019-10-28 18:21 GMT

ಹೊಸದಿಲ್ಲಿ,ಅ.28: ಐಎನ್‌ಎಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಈ.ಡಿ.)ದ ಕಸ್ಟಡಿಯಲ್ಲಿರುವ ಮಾಜಿ ವಿತ್ತಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಸೋಮವಾರ ಬೆಳಿಗ್ಗೆ ಹೊಟ್ಟೆ ನೋವು ಮತ್ತು ಇತರ ಅಸ್ವಸ್ಥತೆಗಳ ಕುರಿತು ದೂರಿಕೊಂಡ ಬಳಿಕ ಅವರನ್ನು ಆರ್‌ಎಂಎಲ್ ಆಸ್ಪತ್ರೆಗೆ ಕರೆದೊಯ್ದಿದ್ದು,ಬಳಿಕ ಸಂಜೆ ಹೆಚ್ಚಿನ ತಪಾಸಣೆಗಾಗಿ ಏಮ್ಸ್‌ಗೆ ಸ್ಥಳಾಂತರಿಸಲಾಗಿದೆ.

ಚಿದಂಬರಂ ಆರೋಗ್ಯ ಕೆಟ್ಟಿದೆ ಎಂದು ಅವರ ನಿಕಟವರ್ತಿಗಳು ಹೇಳಿದರೆ,ಅವರಿಗೆ ಯಾವುದೇ ಗಂಭೀರ ಅಸ್ವಸ್ಥತೆಯಿಲ್ಲ ಎಂದು ಈ.ಡಿ.ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News