ಮಂಗಳೂರು ಮನಪಾ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

Update: 2019-10-30 14:26 GMT

ಮಂಗಳೂರು, ಅ.30: ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ ಸ್ಪರ್ಧಿಸಲು ಜಿಲ್ಲಾ ಕಾಂಗ್ರೆಸ್ ಸಮಿತಿಯು ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಬುಧವಾರ ಪಕ್ಷದ ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.

ಮಾಜಿ ಮೇಯರ್, ಉಪಮೇಯರ್, ಕಾರ್ಪೊರೇಟರ್‌ಗಳ ಪೈಕಿ ಹಲವರಿಗೆ ಟಿಕೆಟ್ ಸಿಕ್ಕಿದೆ. ಹೊಸಬರಿಗೂ ಅವಕಾಶ ಮಾಡಿಕೊಡಲಾಗಿದೆ. ದೇರೇಬೈಲ್ ಉತ್ತರ, ಮಂಗಳಾದೇವಿ ವಾರ್ಡ್‌ನಲ್ಲಿ ಸ್ಪರ್ಧಿಸುವವರು ಯಾರು ಎಂಬುದು ಇನ್ನೂ ಅಂತಿಮಗೊಂಡಿಲ್ಲ. ಪಚ್ಚನಾಡಿಯಲ್ಲಿ ಮಾಜಿ ಮೇಯರ್ ಕವಿತಾ ಸನಿಲ್ ಆಕಾಂಕ್ಷಿಯಾಗಿದ್ದರೂ ಕೂಡಾ ವಿಶಾಲಾಕ್ಷಿ ಎಂಬವರ ಹೆಸರೂ ಕೂಡಾ ಪರಿಶೀಲನೆಯಲ್ಲಿದೆ. ಗುರುವಾರ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದ್ದು, ಕೆಲವು ಕಡೆ ಬಂಡಾಯ ಏಳುವ ಸಾಧ್ಯತೆ ಇದೆ. ಅದನ್ನು ತಪ್ಪಿಸಲು ಜಿಲ್ಲಾ ಹೈಕಮಾಂಡ್ ಹರಸಾಹಸ ಪಡುತ್ತಿದೆ.

ಸುರತ್ಕಲ್ ಪಶ್ಚಿಮ ವಾರ್ಡ್‌ನಲ್ಲಿ ಶಾಂತಾ ಎಸ್.ರಾವ್, ಸುರತ್ಕಲ್ ಪೂರ್ವದಲ್ಲಿ ಇಂದಿರಾ, ಕಾಟಿಪಳ್ಳ ಪೂರ್ವದಲ್ಲಿ ಬಶೀರ್ ಅಹ್ಮದ್, ಕಾಟಿಪಳ್ಳ ಕೃಷ್ಣಾಪುರದಲ್ಲಿ ಸವಿತಾ ಶೆಟ್ಟಿ, ಕಾಟಿಪಳ್ಳ ಉತ್ತರದಲ್ಲಿ ಫಾತಿಮಾ ಬಿ., ಇಡ್ಯಾ ಪೂರ್ವದಲ್ಲಿ ವಿನಿತಾ ರಾವ್, ಇಡ್ಯಾ ಪಶ್ಚಿಮದಲ್ಲಿ ಪ್ರತಿಭಾ ಕುಳಾಯಿ, ಹೊಸಬೆಟ್ಟುವಿನಲ್ಲಿ ಅಶೋಕ್ ಶೆಟ್ಟಿ, ಕುಳಾಯಿಯಲ್ಲಿ ಗಾಯತ್ರಿ ಅರನ್ಹಾ, ಬೈಕಂಪಾಡಿಯಲ್ಲಿ ಸುಧಾಕರ, ಪಣಂಬೂರು ಬೆಂಗ್ರೆಯಲ್ಲಿ ಚಂದ್ರಿಕಾ, ಪಂಜಿಮೊಗರುವಿನಲ್ಲಿ ಅನಿಲ್ ಕುಮಾರ್, ಕುಂಜತ್ತಬೈಲ್ ಉತ್ತರದಲ್ಲಿ ಕೆ.ಮುಹಮ್ಮದ್, ಮರಕಡದಲ್ಲಿ ಹರಿನಾಥ, ಕುಂಜತ್ತ್‌ಬೈಲ್ ದಕ್ಷಿಣದಲ್ಲಿ ಶಾಲಿನಿ ಎಂ.ಎನ್., ಬಂಗ್ರ ಕೂಳೂರಿನಲ್ಲಿ ಪಾಂಡುರಂಗ ಕುಕ್ಯಾನ್, ದೇರೆಬೈಲ್ ಉತ್ತರದಲ್ಲಿ (ಕಾಯ್ದಿರಿಸಲಾಗಿದೆ), ಕಾವೂರಿನಲ್ಲಿ ಭವ್ಯಾ, ಪಚ್ಚನಾಡಿಯಲ್ಲಿ ಕವಿತಾ ಸನಿಲ್/ವಿಶಾಲಾಕ್ಷಿ, ತಿರುವೈಲ್‌ನಲ್ಲಿ ಪ್ರತಿಭಾ ಆರ್.ಶೆಟ್ಟಿ, ಪದವು ಪಶ್ಚಿಮದಲ್ಲಿ ಆಶಾಲತಾ, ಕದ್ರಿ ಪದವಿನಲ್ಲಿ ಉಮೇಶ್, ದೇರೆಬೈಲ್ ಪೂರ್ವದಲ್ಲಿ ಜ್ಯೋತಿ ಎಲ್.ದೇವಾಡಿಗ, ದೇರೆಬೈಲ್ ದಕ್ಷಿಣದಲ್ಲಿ ಎಂ.ಶಶಿಧರ್ ಹೆಗ್ಡೆ, ದೇರೆಬೈಲು ಪಶ್ಚಿಮದಲ್ಲಿ ರೂಪಾ ಚೇತನ್, ದೇರೆಬೈಲು ನೈರುತ್ಯದಲ್ಲಿ ಬಿ.ಪದ್ಮನಾಭ ಅಮೀನ್, ಬೋಳೂರಿನಲ್ಲಿ ಕಮಲಾಕ್ಷ ಸಾಲ್ಯಾನ್, ಮಣ್ಣಗುಡ್ಡದಲ್ಲಿ ಮೇಘ್ನದಾಸ್, ಕಂಬ್ಳದಲ್ಲಿ ರೇಖಾ ಸುರೇಖಾ, ಕೊಡಿಯಾಲ್‌ಬೈಲ್‌ನಲ್ಲಿ ಪ್ರಕಾಶ್ ಬಿ. ಸಾಲ್ಯಾನ್, ಬಿಜೈಯಲ್ಲಿ ಲ್ಯಾನ್ಸಿ ಲಾಟ್ ಪಿಂಟೋ, ಕದ್ರಿ ಉತ್ತರದಲ್ಲಿ ಮಮತಾ ಶೆಟ್ಟಿ, ಕದ್ರಿ ದಕ್ಷಿಣದಲ್ಲಿ ಅಶೋಕ್ ಕುಮಾರ್ ಡಿ.ಕೆ., ಶಿವಭಾಗ್‌ನಲ್ಲಿ ಕಿರಣ ಜೇಮ್ಸ್ ಪೀಟರ್, ಪದವು ಸೆಂಟ್ರಲ್‌ನಲ್ಲಿ ಅಬ್ದುಲ್ ಅಝೀಝ್, ಪದವು ಪೂರ್ವದಲ್ಲಿ ಭಾಸ್ಕರ್ ಕೆ.,ಮರೋಳಿಯಲ್ಲಿ ಕೇಶವ, ಬೆಂದೂರ್‌ನಲ್ಲಿ ನವೀನ್ ಆರ್. ಡಿಸೋಜ, ಫಳ್ನೀರ್‌ನಲ್ಲಿ ಜೆಸಿಂತಾ ವಿಜಯಾ ಆಲ್ಫ್ರೆಡ್, ಕೋರ್ಟ್ ವಾರ್ಡ್‌ನಲ್ಲಿ ಎ.ಸಿ. ವಿನಯರಾಜ್, ಸೆಂಟ್ರಲ್ ಮಾರ್ಕೆಟ್‌ನಲ್ಲಿ ಮಮತಾ ಶೆಣೈ, ಡೊಂಗರಕೇರಿಯಲ್ಲಿ ಮಂಜುಳಾ ವೈ.ನಾಯಕ್, ಕುದ್ರೋಳಿಯಲ್ಲಿ ಸಂಶುದ್ದೀನ್, ಬಂದರ್‌ನಲ್ಲಿ ಝೀನತ್, ಪೋರ್ಟ್‌ನಲ್ಲಿ ಅಬ್ದುಲ್ ಲತೀಫ್, ಕಂಟೋನ್ಮೆಂಟ್‌ನಲ್ಲಿ ಕೆ.ಭಾಸ್ಕರ್ ರಾವ್, ಮಿಲಾಗ್ರಿಸ್‌ನಲ್ಲಿ ಅಬ್ದುಲ್ ರವೂಫ್, ಕಂಕನಾಡಿ ವೆಲೆನ್ಸಿಯಾದಲ್ಲಿ ಆಶಿತ್ ಗ್ರೇಗರಿ ಪಿರೇರಾ, ಕಂಕನಾಡಿಯಲ್ಲಿ ಪ್ರವೀಣ್ ಚಂದ್ರ ಆಳ್ವ, ಅಳಪೆ ದಕ್ಷಿಣದಲ್ಲಿ ಸೇಸಮ್ಮ, ಅಳಪೆ ಉತ್ತರದಲ್ಲಿ ಶೋಭಾ ಕೆ., ಕಣ್ಣೂರಿನಲ್ಲಿ ರಝಿಯಾ, ಬಜಾಲ್‌ನಲ್ಲಿ ಅಶ್ರಫ್, ಜಪ್ಪಿನಮೊಗರಿನಲ್ಲಿ ಮಧುಶ್ರೀ, ಅತ್ತಾವರದಲ್ಲಿ ಕೀರ್ತಿರಾಜ್, ಮಂಗಳಾದೇವಿ (ಕಾಯ್ದಿರಿಸಲಾಗಿದೆ), ಹೊಗೆ ಬಜಾರ್‌ನಲ್ಲಿ ಶರ್ಮಿಳಾ, ಬೋಳಾರದಲ್ಲಿ ರತಿಕಲಾ, ಜೆಪ್ಪುವಿನಲ್ಲಿ ಟಿ.ಹೊನ್ನಯ್ಯ, ಬೆಂಗ್ರೆಯಲ್ಲಿ ಆಸಿಫ್ ಅಹಮದ್‌ಗೆ ಟಿಕೆಟ್ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News