ರಾಜ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ: ಕುಂಜತ್ತಬೈಲಿನ ನೋಬಲ್ ಶಾಲೆಯ ಹುಲಿವೇಷ ತಂಡಕ್ಕೆ ಜಿಲ್ಲಾಧಿಕಾರಿ ಪ್ರಶಂಸೆ
Update: 2019-11-01 09:17 GMT
ಮಂಗಳೂರು, ನ.1: ನಗರದ ನೆಹರು ಮೈದಾನದಲ್ಲಿ ಶುಕ್ರವಾರ ಬೆಳಗ್ಗೆ ಆಯೋಜಿಸಿದ್ದ ದ.ಕ. ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಕರ್ಷಕ ಹುಲಿವೇಷ ಕುಣಿತ ಪ್ರದರ್ಶನ ನೀಡಿದ ಕುಂಜತ್ತಬೈಲಿನ ನೋಬಲ್ ಆಂಗ್ಲ ಮಾಧ್ಯಮ ಶಾಲಾ ವಿದಾರ್ಥಿಗಳ ತಂಡವನ್ನು ಪ್ರಶಂಸಿದ ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ. ನಗದು ಬಹುಮಾನ ನೀಡಿದರು ಎಂದು ಶಾಲಾ ಪ್ರಕಟನೆ ತಿಳಿಸಿದೆ.