ಬೈಂದೂರು ಕಟ್ಟಡ ಕಾರ್ಮಿಕರ ಸಮಾವೇಶ

Update: 2019-11-01 14:49 GMT

ಬೈಂದೂರು, ನ.1: ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಬೈಂದೂರು ಗ್ರಾಮ ಸಮಿತಿಯ ಸರ್ವ ಸದಸ್ಯರ ಸಭೆ ಅ.31ರಂದು ಬೈಂದೂರು ಸಿಐಟಿುು ಕಚೇರಿ ಸಭಾಂಗಣದಲ್ಲಿ ಜರಗಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ರಾಜೀವ ಪಡುಕೋಣೆ, ಬೈಂದೂರು ಪೇಟೆಯ ಪರಿಸರ ವ್ಯಾಪ್ತಿಯಲ್ಲಿ ಕಾರ್ಮಿಕ ಸಂಘದ ಚಟುವಟಿಕೆಗಳು ಕ್ರಿಯಾಶೀಲಗೊಳಿಸಿ ಜನಪರ ಹೋರಾಟ ಸಂಘಟಿಸಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಕಾರ್ಮಿಕ ಮುಖಂಡ ವೆಂಕಟೇಶ ಕೋಣಿ ಮಾತನಾಡಿ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ರದ್ದು ಮಾಡಲು ಹೊರಟಿರುವ ಹಾಗೂ ಸೆಸ್ 1996ರ ಕಾನೂನನ್ನು ತೆಗೆದು ಹಾಕುವ ಕಾರ್ಮಿಕ ವಿರೋಧಿ ಕೇಂದ್ರ ಸರಕಾರದ ವಿರುದ್ಧ ಪಾರ್ಲಿಮೆಂಟ್ ಭವನದ ಎದುರು ಜರಗುವ ಡೆಲ್ಲಿ ಚಲೋ ಹೋರಾಟ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಗಣೇಶ ತೊಂಡೆಮಕ್ಕಿ, ಕೋಶಾಧಿಕಾರಿ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಗಣೇಶ ಮೊಗವೀರ ವಿದ್ಯಾ ನಗರ ಮಾತನಾಡಿದರು. ಅಧ್ಯಕ್ಷತೆಯನ್ನು ಗ್ರಾಮ ಸಮಿತಿ ಅಧ್ಯಕ್ಷೆ ಸುಮತಿ ಬೈಂದೂರು ವಹಿಸಿದ್ದರು.

ಸಂಘದ ತಾಲೂಕು ಪದಾಧಿಕಾರಿ ಮಾಧವ ದೇವಾಡಿಗ, ಅಮ್ಮಯ್ಯ ಪೂಜಾರಿ ಬೀಜೂರು, ಶ್ರೀಧರ ಉಪ್ಪುಂದ, ಉದಯ ಗಾಣಿಗ ಮೊಗೇರಿ, ವಿಜಯ ಕೋಯಾನಗರ ಮೊದಲಾದವರು ಉಪಸ್ಥಿತರಿದ್ದರು. ಗಣೇಶ ಮೊಗವೀರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News