ಮೂಡುಬಿದಿರೆ: ಕಿಶೋರ್ ಕುಮಾರ್‌ಗೆ ರಾಷ್ಟ್ರಪತಿ ಪದಕ

Update: 2019-11-02 18:12 GMT

ಮೂಡುಬಿದಿರೆ: ಇಲ್ಲಿನ ಅಗ್ನಿಶಾಮಕ ಠಾಣೆಯ ನಿವೃತ್ತ ಠಾಣಾಧಿಕಾರಿ ಕಿಶೋರ್ ಕುಮಾರ್ ಅವರಿಗೆ ರಾಷ್ಟçಪತಿ ಪದಕ ಗೌರವಕ್ಕೆ ಆಯ್ಕೆಯಾಗಿದ್ದಾರೆ. 

ಅವರು ಈ ಹಿಂದೆ  ಉಡುಪಿ, ಹುಬ್ಬಳಿ,ಮಂಗಳೂರು, ಪುತ್ತೂರು, ಶೃಂಗೇರಿಯಲ್ಲಿ ಅಗ್ನಿಶಾಮಕದಳದಲ್ಲಿ ಸೇವೆ ಸಲ್ಲಿಸಿದರು. ಮೂಡುಬಿದಿರೆ ಅಗ್ನಿಶಾಮಕ ಠಾಣೆಯಲ್ಲಿ ಠಾಣಾಧಿಕಾರಿಯಾಗಿ ನಿವೃತ್ತಿ ಹೊಂದಿದ್ದರು. 

ಅವರು ಮೂಲತಃ ಮಂಗಳೂರು ಕುಲಶೇಖರ್ ಸಿಲ್ವರ್‌ಗೇಟ್‌ನ ನಿವಾಸಿಯಾಗಿದ್ದು, ದಿ.ಎಂ ಅಚ್ಯುತ-ದಿ.ದೇವಕಿ ಅವರ ಮೂರನೇ ಪುತ್ರ.
ನ.8ರಂದು ಬೆಂಗಳೂರಿನಲ್ಲಿರುವ ರಾಜ್ಯಪಾಲರ ನಿವಾಸದಲ್ಲಿ ರಾಜ್ಯಪಾಲರು ಪದಕ ಪ್ರದಾನ ಮಾಡಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News