ವಿಟ್ಲ ಎಸ್ಸೆಸ್ಸೆಫ್ ಕ್ಯೂ ಟೀಂ ಸದಸ್ಯರಿಂದ ಮೀಲಾದ್ ಸಂದೇಶ ರ್ಯಾಲಿ
ವಿಟ್ಲ, ನ.3: ಪ್ರವಾದಿ ಮುಹಮ್ಮದ್(ಸ.)ರವರ ಜನ್ಮತಿಂಗಳಾದ ರಬೀವುಲ್ ಅವ್ವಲ್ ಆಗಮನದ ಸಂದೇಶದೊಂದಿಗೆ ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ಕ್ಯೂಟೀಂ ಸದಸ್ಯರಿಂದ ಮೀಲಾದ್ ಸಂದೇಶ ರ್ಯಾಲಿ ಶನಿವಾರ ವಿಟ್ಲದಲ್ಲಿ ನಡೆಯಿತು.
ಡಿವಿಷನ್ ಕ್ಯೂ ಟೀಂ ಕಂಟ್ರೋಲರ್ ಕೆ.ಎಂ.ಅಶ್ರಫ್ ಸಖಾಫಿ ಕನ್ಯಾನ ನೇತೃತ್ವದಲ್ಲಿ ನಡೆದ ರ್ಯಾಲಿಯು ವಿಟ್ಲ ಅಶ್-ಅರಿಯ್ಯಾ ಟೌನ್ ಮಸ್ಜಿದ್ ನಿಂದ ಪ್ರಾರಂಭಿಸಿ ಮೇಗಿನಪೇಟೆವರೆಗೆ ಸಾಗಿ ನಂತರ ಖಾಸಗಿ ಬಸ್ಸು ನಿಲ್ದಾಣ, ನಾಲ್ಕು ಮಾರ್ಗದ ಮೂಲಕ ಸಾಗಿ ಮೋತಿ ಸಿಟಿ ಬಳಿ ಸಮಾಪ್ತಿಗೊಂಡಿತು.
ಡಿವಿಷನ್ ಅಧ್ಯಕ್ಷ ಅಬ್ದುರ್ರಹ್ಮಾನ್ ಶರಫಿ ಮೂಡಂಬೈಲು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಹೆಸರಾಂತ ವಾಗ್ಮಿ ಬಶೀರ್ ಮದನಿ ಅಲ್-ಕಾಮಿಲ್ ಕೂಳೂರು ಸಂದೇಶ ಭಾಷಣ ಮಾಡಿದರು.
ಎಸ್.ವೈ.ಎಸ್. ಕನ್ಯಾನ ಸೆಂಟರ್ ಅಧ್ಯಕ್ಷ ಸುಲೈಮಾನ್ ಸಖಾಫಿ ಅಂಗ್ರಿ, ದಾರುನ್ನಜಾತ್ ಟಿಪ್ಪುನಗರ ಮುದರ್ರಿಸ್ ಮುಹಮ್ಮದ್ ಫಾಳಿಲಿ ಅಲ್ ಕಾಮಿಲ್ ಸಖಾಫಿ, ಸುನ್ನೀ ಫೈಝಿ ಪೆರುವಾಯಿ, ಅಬೂಬಕರ್ ಸಖಾಫಿ ಮಂಗಿಲಪದವು, ಎಸ್.ಎಂ.ಎ. ವಿಟ್ಲ ರೀಜನಲ್ ಅಧ್ಯಕ್ಷ ಶರೀಫ್ ತ್ವೈಬಾ ಉಕ್ಕುಡ, ಎಸ್.ವೈ.ಎಸ್. ವಿಟ್ಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಹಾಜಿ ಸೆರ್ಕಳ, ಕಾರ್ಯದರ್ಶಿ ಎಂಕೆಎಂ ಸಖಾಫಿ ಕೊಡಂಗಾಯಿ, ವಿಟ್ಲ ಡಿವಿಷನ್ ನಾಯಕರಾದ ರಫೀಕ್ ಸಅದಿ ಅಳಕೆಮಜಲು, ರಝಾಕ್ ಪೆಲ್ತಡ್ಕ, ರಹೀಂ ಸಖಾಫಿ ವಿಟ್ಲ, ರಝಾಕ್ ಸಖಾಫಿ ಕೆಲಿಂಜ, ಸಿ.ಎಚ್.ಅಬ್ದುಲ್ ಖಾದರ್ ಕೊಡಂಗಾಯಿ, ಹಸನ್ ಸಅದಿ ಕುಕ್ಕಿಲ, ಶಾಹಿರ್ ಕೊಳಂಬೆ, ಹೈದರ್ ಅಳಕೆಮಜಲು ಮತ್ತಿತರರು ಉಪಸ್ಥಿತರಿದ್ದರು.
ಡಿವಿಷನ್ ಪ್ರಧಾನ ಕಾರ್ಯದರ್ಶಿ ಅಬೂಬಕರ್ ಹಿಮಮಿ ಸಖಾಫಿ ಸ್ವಾಗತಿಸಿ, ವಂದಿಸಿದರು.