ಕುರ್ಕಾಲು: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ
ಶಿರ್ವ, ನ.4: ಕುರ್ಕಾಲು ಬಾರೊಂದರ ಬಳಿಯ ಖಾಲಿ ಜಾಗದಲ್ಲಿ ವ್ಯಕ್ತಿ ಯೊಬ್ಬರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಇಂದು ಸಂಜೆ ವೇಳೆ ಪತ್ತೆಯಾಗಿದೆ.
ಮೃತರನ್ನು ಕಟಪಾಡಿ ಸಮೀಪದ ಮಣಿಪುರ ನಿವಾಸಿ ರಫೀಕ್ (37) ಎಂದು ಗುರುತಿಸಲಾಗಿದೆ. ಮದ್ಯ ಸೇವನೆ ಚಟ ಹೊಂದಿದ್ದ ಇವರು ಶುಕ್ರವಾರ ಸಂಜೆಯ ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಮೃತದೇಹ ಕೊಳೆತು ದುರ್ವಾಸನೆ ಬೀರಿದ ಹಿನ್ನೆಲೆಯಲ್ಲಿ ಇವರು ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂತ್ತೆನ್ನಲಾಗಿದೆ.
ಕುರ್ಕಾಲು ವಿನ್ಸೆಂಟ್ ಡಿಸೋಜ ಎಂಬವರ ಖಾಲಿ ಜಾಗದಲ್ಲಿ ಮೃತದೇಹ ಕಂಡುಬಂದಿದ್ದರೆ, ಇವರ ಬೈಕ್, ಹೆಲ್ಮೆಟ್ ಬಾರ್ ಬಳಿ ಹಾಗೂ ಬೈಕಿನ ಕೀ ಮತ್ತು ಮೊಬೈಲ್ ಶರ್ಟ್ನ ಕಿಸೆಯಲ್ಲಿ ಪತ್ತೆಯಾಗಿದೆ. ಇವರು ವಿಪರೀತ ಕುಡಿದ ಪರಿಣಾಮ ಮಲಗಿದ್ದಲ್ಲಿ ಹೃದಯಾಘಾತ ಅಥವಾ ಇತರ ಕಾರಣಗಳಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಣಿಪಾಲ ಆಸ್ಪತ್ರೆಯಲ್ಲಿ ನಡೆಸ ಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.