ಕಾಲೇಜು ವಿದ್ಯಾರ್ಥಿನಿ ನಾಪತ್ತೆ

Update: 2019-11-05 16:23 GMT

ಕಾರ್ಕಳ, ನ.5: ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮಂಡೇಶ್ವರ ತಿರುನಗರ ವೆಂಕಟರಮಣ ಭಟ್ ಎಂಬವರ ಮಗಳು ಕಾರ್ಕಳ ಭುವನೇಂದ್ರ ಕಾಲೇಜು ವಿದ್ಯಾರ್ಥಿನಿ ಸುಧಾ ವಿ.ಭಟ್(18) ಎಂಬವರು ಅ.21ರಂದು ಕಾಲೇಜಿನಿಂದ ಪರೀಕ್ಷಾ ಪ್ರವೇಶ ಪತ್ರ ಪಡೆದುಕೊಂಡು ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.

ಈಕೆ ಕಾರ್ಕಳ ಇರ್ವತ್ತೂರು ಗ್ರಾಮದ ಐದೊಕ್ಲು ನಿವಾಸಿ, ಕಾರ್ಕಳ ಬಸ್ ನಿಲ್ದಾಣದ ಮೊಬೈಲ್ ಅಂಗಡಿಯ ಮಾಲಕ, ವಿವಾಹಿತ ರೋಶನ್ ಪೂಜಾರಿ ಎಂಬಾತನೊಂದಿಗೆ ತೆರಳಿರುವ ವಿಚಾರ ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News