ಮಂಗಳೂರು: ಶ್ರೀನಿವಾಸ ಕಾಲೇಜಿನಲ್ಲಿ “ಬೆಂಕಿ ಇಲ್ಲದೆ ಅಡುಗೆ” ಸ್ಪರ್ಧೆ

Update: 2019-11-08 12:54 GMT

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಹೊಟೇಲ್ ಮ್ಯಾನೇಜ್ ಮೆಂಟ್ ಮತ್ತು ಟೂರಿಸಂ ಕಾಲೇಜು ಆಯೋಜಿಸಿದ “ಬೆಂಕಿ ಇಲ್ಲದೆ ಅಡುಗೆ” ಸ್ಪರ್ಧೆ ‘SAGA-2K19’ ಯಶಸ್ವಿಯಾಗಿ ನಡೆಯಿತು. ಮಂಗಳೂರು ಆಸುಪಾಸಿನ ವಿವಿಧ ಪಿಯು ಕಾಲೇಜುಗಳ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು.

ಮಹೇಶ್ ಪಿಯು ಕಾಲೇಜಿನ ಭೂಮಿಕಾ ಮತ್ತು ಧನುಶ್ರೀ ಮೊದಲ ಬಹುಮಾನ ಗೆದ್ದುಕೊಂಡರು. ರೋಸರಿಯಾ ಪಿಯು ಕಾಲೇಜಿನ ಅಬ್ದುಲ್ ಶಝೀಮ್ ಮತ್ತು ಅಕಿಫ್ ಇಬ್ರಾಹಿಂ ಮತ್ತು ಉಡುಪಿ ಎಂಜಿಎ ಪಿಯು ಕಾಲೇಜಿನ ಅಮೃತಾ ಮತ್ತು ನಿಶಾ ಅನುಕ್ರಮವಾಗಿ ದ್ವೀತೀಯ ಮತ್ತು ತೃತೀಯ ಸ್ಥಾನ ಗೆದ್ದುಕೊಂಡರು.

ನಾರಾಯಣ ಗುರು,ಮಹೇಶ್, ಶಾರದಾ ಪಿಯು ಕಾಲೇಜಿಗೆ ವಿವಿಧ ವಿಭಾಗಗಳಲ್ಲಿ ಹಾಗೂ ಗಣಪತಿ ಪಿಯು ಕಾಲೇಜಿಗೆ ಸರ್ವತೋಮುಖ ಪ್ರದರ್ಶನಕ್ಕಾದಿ ವಿಶೇಷ ಬಹುಮಾನ ನೀಡಲಾಯಿತು.

ಹೊಟೇಲ್ ಮ್ಯಾನೇಜ್ ಮೆಂಟ್ ಮತ್ತು ಟೂರಿಸಂ ಕಾಲೇಜಿನ ಡೀನ್ ಸ್ವಾಮಿನಾಥನ್ ಎಸ್ ಅವರು ಬಹುಮಾನ ವಿತರಿಸಿದರು. ಸ್ಪರ್ಧೆಯ ಸಂಯೋಜಕರಾದ ಸುಜತಾ ಶಂಕರ್ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಸನತ್ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News