ವಂ.ಮಹೇಶ್ ಡಿಸೋಜಾ ಸಾವಿನ ನೈಜ ಕಾರಣ ಬಹಿರಂಗ ಪಡಿಸಲು ಕೆಥೊಲಿಕ್ ಸಭಾ ಆಗ್ರಹ

Update: 2019-11-08 15:38 GMT

ಉಡುಪಿ, ನ.8: ಅಕಾಲಿಕವಾಗಿ ಸಾವಿಗೆ ಶರಣಾದ ಶಿರ್ವ ಇಗರ್ಜಿಯ ಧರ್ಮಗುರು ಹಾಗೂ ಡೊನ್‌ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂ.ಮಹೇಶ್ ಡಿಸೋಜಾರ ಸಾವಿನ ನೈಜ ಕಾರಣಗಳನ್ನು ಕಂಡು ಹಿಡಿದು ಭಕ್ತರಲ್ಲಿ ಇರುವ ಗೊಂದಲಗಳಿಗೆ ಶೀಘ್ರ ತೆರೆ ಎಳೆಯುವಂತೆ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್, ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.

ವಂ. ಮಹೇಶ್ ಡಿಸೋಜಾ ಅವರ ಸಾವಿನ ತನಿಖೆ ಪ್ರಗತಿಯಲ್ಲಿರುವಾಗ, ಅವರ ಸಾವಿನ ಹಿಂದಿನ ನೈಜ ಕಾರಣಗಳನ್ನು ಕಂಡು ಹಿಡಿಯಲು ಎಲ್ಲಾ ರೀತಿಯ ಕಾನೂನಾತ್ಮಕ ಕ್ರಮಗಳಿಗೆ ಕೆಥೊಲಿಕ್ ಸಭಾ ಸಹಕಾರ ಹಾಗೂ ಬೆಂಬಲವಿದ್ದು ಪೊಲೀಸ್ ಇಲಾಖೆ ಭಕ್ತರಲ್ಲಿ ಇರುವ ಗೊಂದಲಿಗಳಿಗೆ ಶೀಘ್ರ ತೆರೆ ಎಳೆಯಬೇಕು ಎಂದಿದೆ.

ಇದೇ ವೇಳೆ ಆಧಾರರಹಿತ ವರದಿಗಳನ್ನು ತಿದ್ದಲಾದ ವೀಡಿಯೋ ತುಣುಕು ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಗೊಂದಲವನ್ನು ಸೃಷ್ಟಿಸು ವವರ ವಿರುದ್ದ ಕಾನೂನಾತ್ಮಕ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೆಥೊಲಿಕ್ ಸಭಾ, ಪೊಲೀಸ್ ಇಲಾಖೆ ಹಾಗೂ ಸೈಬರ್ ಇಲಾಖೆಯನ್ನು ಆಗ್ರಹಿಸಿದೆ. ಸಾವಿನ ಕುರಿತಂತೆ ಯಾವುದೇ ಸಾಕ್ಷ್ಯಾಧಾರಗಳಿದ್ದವರು ಅವನ್ನು ಈ ಕೇಸಿನ ತನಿಖಾಧಿಕಾರಿ ಗಳಿಗೆ ಸಲ್ಲಿಸುವಂತೆ ಕೆಥೊಲಿಕ್ ಸಭಾ ವಿನಂತಿಸಿದೆ.

ದಿ. ಫಾ.ಮಹೇಶ್ ಡಿಸೋಜಾರ ಅಸಹಜ ಸಾವಿನ ಹಿಂದಿನ ವಿಷಯಗಳ ಗೊಂದಲಗಳನ್ನು ದುರುಪಯೋಗಪಡಿಸುವವರ ವಿರುದ್ದ, ಧರ್ಮಕೇಂದ್ರ ಹಾಗೂ ಧರ್ಮಕ್ಷೇತ್ರದ ಧಾರ್ಮಿಕ ಮುಖಂಡರ ವಿರುದ್ದ ಆಧಾರ ರಹಿತ ಅವಹೇಳನಕಾರಿ ಕೃತ್ಯಗಳನ್ನು ಕೆಥೊಲಿಕ್ ಸಭಾ ವಿರೋಧಿಸುವುದ ರೊಂದಿಗೆ ಖಂಡಿಸುತ್ತದೆ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News