ಕಾರ್ಕಳ: ರಾಮಸಮುದ್ರದಲ್ಲಿ ಮುಳುಗಿ ಸಾವು

Update: 2019-11-08 16:22 GMT

ಕಾರ್ಕಳ, ನ.8: ಮದ್ಯಪಾನ ಮಾಡಿ ಕಾರ್ಕಳದ ರಾಮಸಮುದ್ರದಲ್ಲಿ ಈಜಲೆಂದು ಇಳಿದ ಮಧ್ಯವಯಸ್ಕರೊಬ್ಬರು ನೀರಿನಲ್ಲಿ ಮುಳುಗಿ, ಚಿಕಿತ್ಸೆಗೆಂದು ದಾಖಲಾದ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಮಿಯ್ಯರು ಗ್ರಾಮದ ಜೋಡುಕಟ್ಟೆ ಮಂಗಳಪಾದೆಯ ನಿವಾಸಿ ಶ್ರೀಧರ ಪೂಜಾರಿ (42) ಅವರು ಗುರುವಾರ ಕೂಲಿ ಕೆಲಸದಿಂದ ಮರಳಿ ಬಂದು ಮದ್ಯಪಾನ ಮಾಡಿ ಸಂಜೆ 4:30ರ ಸುಮಾರಿಗೆ ತನ್ನ ಸ್ನೇಹಿತರೊಂದಿಗೆ ಈಜಲೆಂದು ರಾಮಸಮುದ್ರಕ್ಕೆ ಇಳಿದಿದ್ದರು. ಆದರೆ ಈಜುವಾಗ ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿದವರನ್ನು ಸ್ನೇಹಿತರು ನೀರಿನಿಂದ ಮೇಲಕ್ಕೆತ್ತಿ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ ಮೃತಪಟ್ಟರೆಂದು ಪ್ರಕರಣ ದಾಖಲಿಸಿಕೊಂಡಿರುವ ಕಾರ್ಕಳ ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News