ಭಟ್ಕಳ : ಅಮೆಚೂರು ಕಬಡ್ಡಿ ಅಸೋಸಿಯೇಶನ್ ಪದಾಧಿಕಾರಿಗಳ ಆಯ್ಕೆ

Update: 2019-11-08 17:59 GMT

ಭಟ್ಕಳ : ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್‍ನ ನೂತನ ಅಧ್ಯಕ್ಷರಾಗಿ ಅಬ್ದುಲ್ ರವೂಫ್ ನಾಯ್ತೆ ಆಯ್ಕೆಯಾಗಿದ್ದಾರೆ.

ಗುರುವಾರ ನಡೆದ ಚುನಾವಣೆಯಲ್ಲಿ ಇನಾಯಿತುಲ್ಲಾ ಶಾಬಂದ್ರಿ ಮತ್ತು ಅಬ್ದುಲ್ ರವೂಫ್ ನಡುವೆ ಪೈಪೋಟಿ ನಡೆದು ಅಬ್ದುಲ್ ರವೂಫ್ ಚುನಾಯಿತರಾದರೂ ಉಪಾಧ್ಯಕ್ಷರಾಗಿ ಪ್ರಕಾಶ ನಾಯ್ಕ್ ಹಾಗೂ ಜಾಫರ್ ಹೈದರ್ ಅವಿರೋಧವಾಗಿ ಆಯ್ಕೆಯಾದರು.

ಪ್ರಧಾನ ಕಾರ್ಯದರ್ಶಿಯಾಗಿ ಎರಡನೆ ಬಾರಿಗೆ ಶ್ರೀಧರ ನಾಯ್ಕ ಆಯ್ಕೆಯಾದರು. ಸಮೀರ್ ಮೋಮಿನ ಸಹಕಾರ್ಯದರ್ಶಿ, ದಿನೇಶ ಗವಾಳಿ ಖಜಾಂಚಿಯಾಗಿ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News