ಅಂಬೇಡ್ಕರ್ ಪ್ರತಿಷ್ಠಾನ ಅಧ್ಯಕ್ಷ ಶಿವಪ್ಪ ರೆಂಕೆದಗುತ್ತು ನಿಧನ

Update: 2019-11-09 17:04 GMT

ಬೆಳ್ತಂಗಡಿ: ಅಂಬೇಡ್ಕರ್ ಪ್ರತಿಷ್ಠಾನದ ಅಧ್ಯಕ್ಷ ಶಿವಪ್ಪ ರೆಂಕೆದಗುತ್ತು (55) ಇಂದು ಬೆಳ್ತಂಗಡಿಯ ತನ್ನ ಸ್ವಗೃಹದಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ.

ದಲಿತ ಚಳವಳಿಗಳ ಮುಂಚೂಣಿಯಲ್ಲಿದ್ದ ಶಿವಪ್ಪ ಅವರು ಕಳೆದ ಕೆಲ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಸಮತಾ ಸೈನಿಕ ದಳದ ಮೂಲಕವಾಗಿ ಚಳವಳಿಯ ಭಾಗವಾದ ಇವರು ಮುಂದೆ ರಾಜ್ಯದ ಗಮನ ಸೆಳೆದಿದ್ದ ಕರ್ನಾಟಕ ಜನಾಂದೋಲನ ಸಂಘಟನೆಯ ರಾಜ್ಯ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಇದೀಗ ಅಂಬೇಡ್ಕರ್ ಪ್ರತಿಷ್ಠಾನ  ಸಂಘಟನೆಯ ಅಧ್ಯಕ್ಷರಾಗಿದ್ದರು. ಇವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News