ಫರಂಗಿಪೇಟೆ- ಕುಂಪನಮಜಲು-ಕುಂಜತ್ಕಳದಲ್ಲಿ ಮೀಲಾದ್ ರ್ಯಾಲಿ

Update: 2019-11-10 11:20 GMT

ಬಂಟ್ವಾಳ, ನ. 10: ಫರಂಗಿಪೇಟೆ ಕೇಂದ್ರ ಜುಮಾ ಮಸೀದಿ, ಅರಫಾ ಜುಮಾ ಮಸೀದಿ ಕುಂಪಲಮಜಲು ಹಾಗೂ ನೂರುಲ್ ಹುದಾ ಮದ್ರಸ ಕುಂಜತ್ಕಳ ಇದರ ವತಿಯಿಂದ ಮೀಲಾದುನ್ನಬಿ ರ್ಯಾಲಿ ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯಿತು.

ಫರಂಗಿಪೇಟೆ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಎಫ್. ಮುಹಮ್ಮದ್ ಬಾವ, ಉಪಾಧ್ಯಕ್ಷ, ಮಾಜಿ ಜಿಪಂ ಸದಸ್ಯ ಉಮರ್ ಫಾರೂಕ್, ಕಾರ್ಯದರ್ಶಿ ಯೂಸುಫ್ ಅಲಂಕಾರ್, ಜೊತೆ ಕಾರ್ಯದರ್ಶಿ ಅಬೂಬಕರ್ ಫರಂಗಿಪೇಟೆ, ಪ್ರಮುಖರಾದ ಮಜೀದ್ ಫರಂಗಿಪೇಟೆ, ಅರಫಾ ಜುಮಾ ಮಸೀದಿ ಅಧ್ಯಕ್ಷ ಬುಖಾರಿ ಕುಂಪನಮಜಲು, ಆಸಿಫ್ ಇಕ್ಬಾಲ್, ನೂರುಲ್ ಹುದಾ ಮದ್ರಸದ ಅಧ್ಯಕ್ಷ ಅಶ್ರಫ್ ಕುಂಜತ್ಕಳ, ಪ್ರಮುಖರಾದ ಇಸ್ಮಾಯಿಲ್ ಐ.ಕೆ., ಬಶೀರ್ ಟಿ.ಕೆ., ರಿಯಾಝ್ ಕುಂಪನಮಜಲು, ಇಬ್ರಾಹಿಂ, ಹಸನಬ್ಬ ಸುಜೀರ್, ಮುಹಮ್ಮದ್ ಮೋನು, ಸಿರಾಜ್ ಕೊಡಿಮಜಲು ಹಾಗೂ ಮೂರು ಮಸೀದಿಗಳ ಪದಾಧಿಕಾರಿಗಳಿದ್ದರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News