15ರಿಂದ ಮಾಹೆಯ ಘಟಿಕೋತ್ಸವ
Update: 2019-11-12 16:11 GMT
ಮಣಿಪಾಲ, ನ.12: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ಯ 27ನೇ ಘಟಿಕೋತ್ಸವ ನ.15ರಿಂದ 17ರವರೆಗೆ ಮಣಿಪಾಲದ ಕೆಎಂಸಿ ಗ್ರೀನ್ಸ್ನಲ್ಲಿ ನಡೆಯಲಿದೆ. ಪ್ರತಿದಿನ ಅಪರಾಹ್ನ 3:00ಕ್ಕೆ ಪ್ರಾರಂಭಗೊಳ್ಳುವ ಈ ಘಟಿಕೋತ್ಸವದಲ್ಲಿ ಸುಮಾರು 4000ಕ್ಕೂ ಅಧಿಕ ಪದವಿ, ಸ್ನಾತಕೋತ್ತರ, ಪಿಎಚ್ಡಿ ಹಾಗೂ ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳು ತಮ್ಮ ಪದವಿಗಳನ್ನು ಸ್ವೀಕರಿಸಲಿದ್ದಾರೆ.
ನ.15ರ ಮೊದಲ ದಿನದಂದು ಬೆಂಗಳೂರು ಅಕ್ಸಿಲರ್ ವೆಂಚೂರ್ಸ್ನ ಅಧ್ಯಕ್ಷ ಎಸ್.ಗೋಪಾಲಕೃಷ್ಣನ್, ನ.16ರಂದು ಹೊಸದಿಲ್ಲಿಯ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಪರಿಷತ್ತಿನ ಮಹಾ ನಿರ್ದೇಶಕ ಹಾಗೂ ಡಿಎಸ್ಐಆರ್ನ ಕಾರ್ಯದರ್ಶಿ ಡಾ.ಶೇಖರ್ ಸಿ.ಮಂಡೆ ಹಾಗೂ ನ.17ರಂದು ಯುಎಇಯ ಉದ್ಯಮಿ ಮಹೇಶ್ ಎಸ್. ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.