ಬ್ರಹ್ಮಾವರ: ನ.14ರಂದು ಜನಜಾಗೃತಿ ಜಾಥ
Update: 2019-11-12 16:23 GMT
ಬ್ರಹ್ಮಾವರ: ನಾಳೆ ಜನಜಾಗೃತಿ ಜಾಥ ಬ್ರಹ್ಮಾವರ, ನ.12: ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ನ.14ರಂದು ಜಯಂಟ್ಸ್ ಗ್ರೂಪ್, ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಎಸ್ಎಂಎಸ್ ಪದವಿ ಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಮಧುಮೇಹ ರೋಗದ ಬಗ್ಗೆ ಜನಜಾಗ್ರತಿ ಜಾಥಾವು ಸಮುದಾಯ ಆರೋಗ್ಯ ಕೇಂದ್ರದಿಂದ ಆರಂಭಗೊಂಡು ಬ್ರಹ್ಮಾವರ ಪೇಟೆಯ ಮೂಲ ಬಸ್ನಿಲ್ದಾಣದಲ್ಲಿ ಸಮಾಪ್ತಿಗೊಳ್ಳಲಿದೆ.
ಈ ಸಂದರ್ಭದಲ್ಲಿ ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಧುಮೇಹ ರಕ್ತ ತಪಾಸಣೆ, ದೇಹದ ಕೊಬ್ಬಿನಾಂಶ ಪರೀಕ್ಷೆ, ರಕ್ತದೊತ್ತಡ ತಪಾಸಣೆ ನಡೆಯಲಿದೆ. ಅಲ್ಲದೇ ಮೂಳೆ ಸಾಂದ್ರತೆ ತಪಾಸಣೆಯು ಬೆಳಗ್ಗೆ 9:30ರಿಂದ ಅಪರಾಹ್ನ1:00 ರವರೆಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಲಿದೆ ಎಂು ಸಂಘಟಕರ ಪ್ರಕಟಣೆ ತಿಳಿಸಿದೆ.