ಮಂಗಳೂರು: ಬಸ್‌ನಿಂದ ಹೊರಗೆಸೆಯಲ್ಪಟ್ಟು ಮಹಿಳೆಗೆ ಗಾಯ

Update: 2019-11-12 16:44 GMT

ಮಂಗಳೂರು, ನ.12: ನಗರದ ಉರ್ವ ಚಿಲಿಂಬಿಯಲ್ಲಿ ಸೋಮವಾರ ಸಂಜೆ ಖಾಸಗಿ ಸರ್ವಿಸ್ ಬಸ್‌ನಿಂದ ಮಹಿಳೆಯೊಬ್ಬರು ಹೊರಗೆಸೆಯಲ್ಪಟ್ಟು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.

ಮೂಲತಃ ಬಾಗಲಕೋಟೆ ನಿವಾಸಿಯಾಗಿದ್ದು, ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿರುವ ಶಿವ ಗಂಗವ್ವ (37) ಗಾಯಗೊಂಡವರು.
ಶಿವಗಂಗವ್ವ ಅವರು ಮಂಗಳೂರು ಮಹಾನಗರ ಪಾಲಿಕೆಯ ತ್ಯಾಜ್ಯ ನಿರ್ವಹಣೆಯ ಗುತ್ತಿಗೆ ವಹಿಸಿಕೊಂಡಿರುವ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಉದ್ಯೋಗಿಯಾಗಿದ್ದು, ಬೈಕಂಪಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ.

ಸೋಮವಾರ ಸಂಜೆ ಕೆಲಸ ಮುಗಿಸಿ ಖಾಸಗಿ ಸರ್ವೀಸ್ ಬಸ್‌ನಲ್ಲಿ ಬೈಕಂಪಾಡಿಗೆ ಪ್ರಯಾಣಿಸುತ್ತಿದ್ದ ಶಿವ ಗಂಗವ್ವ ಚಿಲಿಂಬಿಯಲ್ಲಿ ಬಸ್ ಚಾಲಕನು ದಿಢೀರನೆ ಬ್ರೇಕ್ ಹಾಕಿದಾಗ ಬಾಗಿಲಿನಿಂದ ಹೊರಗೆ ಎಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದರು. ಅವರ ತಲೆಗೆ ಏಟು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ಮಂಗಳೂರು ನಗರ ಸಂಚಾರ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News