ಕುಂದಾಪುರ: ಜುಗಾರಿ ಆಡುತ್ತಿದ್ದ ನಾಲ್ವರ ಬಂಧನ

Update: 2019-11-12 17:18 GMT

ಕುಂದಾಪುರ, ನ.12: ಆಲೂರು ಪೇಟೆಯ ಕಾಂಪ್ಲೆಕ್ಸ್ ಬಳಿ ನ.11ರಂದು ಸಂಜೆ ವೇಳೆ ಅಂದರ್-ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ನಾಲ್ಕು ಮಂದಿಯನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿದ್ದಾರೆ.

ಜನ್ನಾಲು ನಿವಾಸಿ ಹರೀಶ ಭಂಡಾರಿ(30), ಬಿಜಾಪುರದ ಸಿದ್ದು ಜುಮ್ಮಣ್ಣ ಪೂಜಾರ್ (25), ಬೆಳಗಾವಿಯ ಶಮನಪ್ಪಯಲ್ಲಪ್ಪ ಮಾವರ್ಕರ್(48), ಯಾದಗಿರಿಯ ಶಿವನ ಗೌಡ(25) ಬಂಧಿತ ಆರೋಪಿಗಳು. ಇವರಿಂದ 4,700ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News