ನ.14ರಂದು ಮಚ್ಚಂಪಾಡಿಗೆ ಮೌಲವಿ ಅಬ್ದುಲ್ ಗಫೂರ್ ಕೀಚೇರಿ

Update: 2019-11-13 10:59 GMT

ಮಂಜೇಶ್ವರ, ನ.13: ಮಚ್ಚಂಪಾಡಿ ಜುಮಾ ಮಸೀದಿ, ಹಿಮಾಯತುಲ್ ಇಸ್ಲಾಮ್ ಮದ್ರಸ ಮೀಲಾದ್ ಸಮಿತಿಯ ಆಶ್ರಯದಲ್ಲಿ ನ.14ರಿಂದ 16ರವರೆಗೆ ಮೀಲಾದ್ ಫೆಸ್ಟ್ ಹಾಗೂ ಹುಬ್ಬುರ್ರಸೂಲ್ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನ.14ರಂದು ಮಗ್ರಿಬ್ ನಮಾಝ್ ಬಳಿಕ ಹುಬ್ಬುರ್ರಸೂಲ್ ಪ್ರವಚನ ನಡೆಯಲಿದ್ದು, ಖ್ಯಾತ ವಾಗ್ಮಿ ಕೀಚೇರಿ ಅಬ್ದುಲ್ ಗಫೂರ್ ಮೌಲವಿ ಮುಖ್ಯ ಭಾಷಣ ಮಾಡಲಿರುವರು. 15ರಂದು ಮಗ್ರಿಬ್ ನಮಾಝ್ ಬಳಿಕ ಮಚ್ಚಂಪಾಡಿ ದರ್ಸ್ ವಿದ್ಯಾರ್ಥಿಗಳ ಮೀಲಾದ್ ಕಾರ್ಯಕ್ರಮ ನಡೆಯಲಿದೆ.

16ರಂದು ಅಸರ್ ನಮಾಝ್ ಬಳಿಕ ಮಚ್ಚಂಪಾಡಿ ಹಿಮಾಯತುಲ್ ಇಸ್ಲಾಮ್ ಮದ್ರಸಾ ವಿದ್ಯಾರ್ಥಿಗಳ ಮೀಲಾದ್ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News