ಗಾಂಜಾ ಸೇವನೆ: ನಾಲ್ವರು ವಶಕ್ಕೆ
Update: 2019-11-13 16:07 GMT
ಮಣಿಪಾಲ, ನ.13: ಗಾಂಜಾ ಸೇವನೆಗೆ ಸಂಬಂಧಿಸಿ ಮಣಿಪಾಲ ಪೊಲೀಸರು ನಾಲ್ಕು ಮಂದಿಯನ್ನು ನ.3ರಂದು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಣಿಪಾಲ ಬಸ್ ನಿಲ್ದಾಣದ ಬಳಿ ಹರಿಯಾಣದ ರೋಹಿತ್ ಚಟರ್ಜಿ (21), ಈಶ್ವರನಗರ ಬಳಿ ಇಂದ್ರಾಳಿಯ ಮಯೂರ ಶೆಟ್ಟಿ(22), ಮಣಿಪಾಲ ಕೆಎಂಸಿ ವಸತಿಗೃಹದ ನಿವಾಸಿ ಅಭಿಜಿತ್ ಕುಡುವ(23) ಹಾಗೂ ಈಶ್ವರ ನಗರದ ಹರಿ(21) ಎಂಬವರನ್ನು ವಶಕ್ಕೆ ಪಡೆದು ಮಣಿಪಾಲ ಕೆಎಂಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿ ಪರೀಕ್ಷಿಸಿದ್ದು, ಇದರಿಂದ ಇವರೆಲ್ಲರು ಗಾಂಜಾ ಸೇವಿಸಿರುವ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.