ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಬಿಡುಗಡೆ

Update: 2019-11-13 16:28 GMT

ಮಂಗಳೂರು, ನ.13: ರಾಜ್ಯ ಸರಕಾರವು ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹಧನ ವಿವರಗಳನ್ನು ಕ್ಷೀರಸಿರಿ ತಂತ್ರಾಂಶದಲ್ಲಿ ಅಳವಡಿಸಿ ನೇರವಾಗಿ ಖಜಾನೆ-2ರಿಂದ ಪಾವತಿಸುವ ಪದ್ಧತಿ ಅನುಸರಿಸುತ್ತಿದ್ದು, ಎಪ್ರಿಲ್ ಮತ್ತು ಮೇ ತಿಂಗಳ ಪ್ರೋತ್ಸಾಹಧನ ಬಿಡುಗಡೆ ಮಾಡಲಾಗಿದೆ.

ಇದರಲ್ಲಿ ಶೇ.92ರಷ್ಟು ಹೈನುಗಾರರ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಯಾಗಿದೆ. ಉಳಿದ ಶೇ.8ರಷ್ಟು ಪ್ರೋತ್ಸಾಹಧನವು ಹೈನುಗಾರರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗದೆ, ಆಧಾರ್‌ನಲ್ಲಿರವ ಹೆಸರು ಮತ್ತು ಬ್ಯಾಂಕ್ ಉಳಿತಾಯ ಖಾತೆಯಲ್ಲಿರುವ ಹೆಸರು ಹೊಂದಾಣಿಕೆಯಾಗದೆ ಹಾಗೂ ಬ್ಯಾಂಕ್ ಖಾತೆಗಳು ಊರ್ಜಿತವಾಗಿಲ್ಲದ ಕಾರಣ ಹಣ ಪಾವತಿಯಾಗದೆ ಉಳಿದಿದೆ.

ರಾಜ್ಯ ಸರಕಾರವು ಪ್ರೋತ್ಸಾಹಧನವನ್ನು ಪಶುಪಾಲನಾ ಇಲಾಖೆಯ ಹಾಗೂ ಖಜಾನೆ-2 ಮುಖಾಂತರ ಕ್ಷೀರಸಿರಿ ತಂತ್ರಜ್ಞಾನದಲ್ಲಿ ಸಂಘದವರು ನೀಡಿರುವ ಮಾಹಿತಿಯ ಆಧಾರದಲ್ಲಿ ದಾಖಲಿಸಿದ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳ ಹೈನುಗಾರರ ಹಾಲಿನ ವಿವರವನ್ನು ಈಗಾಗಲೇ ಕಳುಹಿಸಲಾಗಿದ್ದು, ಸದ್ಯದಲ್ಲಿಯೇ ಹಣ ಪಾವತಿಯಾಗಲು ಕ್ರಮ ಕೈಗೊಳ್ಳಲಾಗುತ್ತಿದೆ. ಹಾಲಿನ ಪ್ರೋತ್ಸಾಹಧನ ಪಾವತಿಯಾಗದೇ ಉಳಿದಿರುವ ಹೈನುಗಾರರು, ಈ ಬಗ್ಗೆ ಸಂಘದ ಕಾರ್ಯದರ್ಶಿಯಿಂದ ಮಾಹಿತಿ ಪಡೆಯಬಹುದು.

ರಾಜ್ಯ ಸರಕಾರವು ನೀಡುತ್ತಿರುವ ಪ್ರೋತ್ಸಾಹಧನವನ್ನು ಹೈನುಗಾರರು ಪಡೆದುಕೊಂಡು ಉತ್ತಮ ಗುಣಮಟ್ಟದ ಹಾಲನ್ನು ಸಂಘಗಳಿಗೆ ನೀಡಲು ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News