ನ.19: ನಾರಾಯಣ ಗುರು ಜೀವನ ಸಾಧನೆ- ಉಪನ್ಯಾಸ ಮಾಲೆ

Update: 2019-11-13 16:29 GMT

ಮಂಗಳೂರು, ನ.13: ಮಂಗಳೂರು ವಿಶ್ವವಿದ್ಯಾನಿಲಯ, ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ತುಳು ಸ್ನಾತ್ತಕೋತ್ತರ ಅಧ್ಯಯನ ವಿಭಾಗ, ವಿವಿ ಸಂಧ್ಯಾ ಕಾಲೇಜು ಮಂಗಳೂರು ಇವುಗಳ ಸಹಯೋಗದೊಂದಿಗೆ ‘ಗುರುವಿನ ಅರಿವು- ನಾರಾಯಣ ಗುರು ಜೀವನ ಸಾಧನೆ’- ಉಪನ್ಯಾಸ ಮಾಲೆಯು ನ.19ರಂದು ಸಂಜೆ 5:30ಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ನಡೆಯಲಿದೆ.

ಹಿರಿಯ ಲೇಖಕ ಪೇರೂರು ಜಾರು ಅವರು ತಲಸ್ಪರ್ಶಿ ಅಧ್ಯಯನ ಮಾಡಿ ಗುರುಗಳ ಕುರಿತಾಗಿ ತುಳು ಭಾಷೆಯಲ್ಲಿ ರಚಿಸಿರುವ ‘ಗುರುಕುಲೆ ಗುರು ನಾರಾಯಣ’ ಮಹಾಕಾವ್ಯದ ಕವಿವಾಚ್ಯ ಪರಿಚಯ ಹಾಗೂ ವಿಚಾರ ಗೋಷ್ಠಿ ಸಂವಾದ ಕಾರ್ಯಕ್ರಮ ನಡೆಸಲಿದ್ದಾರೆ.

ಕಾರ್ಯಕ್ರಮದಲ್ಲಿ ವಿವಿ ಸಂಧ್ಯಾಕಾಲೇಜು ಪ್ರಾಂಶುಪಾಲ ಡಾ.ರಾಮಕೃಷ್ಣ ಬಿ.ಎಂ. ಅಧ್ಯಕ್ಷತೆ ವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News