ಎರಡು ವರ್ಷದ ಹಿಂದೆ ನಾಪತ್ತೆಯಾದ ಮೊಮ್ಮಗನನ್ನು ಹುಡುಕಿಕೊಡುವಂತೆ ಅಜ್ಜಿಯ ದೂರು

Update: 2019-11-13 16:51 GMT

ಪುತ್ತೂರು : ಎರಡು ವರ್ಷದ ಹಿಂದೆ ನಾಪತ್ತೆಯಾಗಿರುವ ಯುವಕನೊಬ್ಬನ್ನು ಹುಡುಕಿ ಕೊಡುವಂತೆ ಆತನ ಅಜ್ಜಿಯಾದ ವೃದ್ಧೆಯೊಬ್ಬರು ಇದೀಗ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ. 

ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಮುರಂಗಿ ನಿವಾಸಿ ದಿವಂಗತ ವೆಂಕಪ್ಪ ನಾಯ್ಕ ಅವರ ಪತ್ನಿ, ವೃದ್ಧೆಯಾಗಿರುವ ಸರಸ್ವತಿ ಅವರು ಮೊಮ್ಮಗನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ದೂರು ನೀಡಿದ್ದು, ನನ್ನ ಜತೆ ವಾಸ್ತವ್ಯವಿದ್ದ ಮೊಮ್ಮಗ ರಂಜಿತ್ (24), ಕಳೆದ 5 ವರ್ಷ 3 ತಿಂಗಳ ಹಿಂದೆ ಉದ್ಯೋಗ ನಿಮಿತ್ತ ಮಂಗಳೂರಿಗೆ ಹೋಗಿ ಅಲ್ಲಿ ಉದ್ಯೋಗ ಮಾಡುತ್ತಿದ್ದ. ಮೂರು ವರ್ಷದ ತನಕ ಆಗಾಗ ಮನೆಗೆ ಬಂದು ಹೋಗುತ್ತಿದ್ದ ಆತ ನಮ್ಮ ಸಂಪರ್ಕದಲ್ಲಿದ್ದ. ಕಳೆದ 2017ರ ಅ.18ರಂದು ಕೆಲಸಕ್ಕೆಂದು ಹೋದ ಆತ ಈತನಕ ಮರಳಿ ಬಾರದೆ ನಾಪತ್ತೆಯಾಗಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ನಾಪತ್ತೆಯಾಗಿರುವ ರಂಜಿತ್ ಐತ್ತಪ್ಪ ನಾಯ್ಕ ಹಾಗೂ ಕಮಲ ದಂಪತಿಯ ಪುತ್ರ. ಮಗನನ್ನು ಹುಡಿಕಿ ಕೊಡುವಂತೆ ಅವರು ಕೂಡ ಪೊಲೀಸರಿಗೆ ಮನವಿ ಮಾಡಿದ್ದಾರೆ. ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News