ನ್ಯಾಯಾಧೀಕರಣ ಸದಸ್ಯರ ನೇಮಕಕ್ಕೆ ನೂತನ ನಿಯಮ ರಚಿಸಲು ಸುಪ್ರೀಂ ಆದೇಶ

Update: 2019-11-13 17:02 GMT

ಹೊಸದಿಲ್ಲಿ,ನ.13: ನ್ಯಾಯಾಧಿಕರಣಗಳ ಕುರಿತಾದ 2017ರ ವಿತ್ತೀಯ ಕಾಯ್ದೆಯ ನಿಯಮಾವಳಿಗಳನ್ನು ಸುಪ್ರೀಂಕೋರ್ಟ್ ಬುಧವಾರ ರದ್ದುಪಡಿಸಿದ್ದು, ನ್ಯಾಯಾಧೀಕರಣಗಳ ಸದಸ್ಯರ ನೇಮಕಾತಿಗೆ ಸಂಬಂಧಿಸಿದ ನಿಯಮಾವಳಿಗಳನ್ನು ಪುನರಾಚಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

 ನ್ಯಾಯಾಧೀಕರಣಗಳ ನೂತನ ನಿಯಮಾವಳಿಗಳ ರಚನೆಗೆ ಸಂಬಂಧಿಸಿ ಅಧ್ಯಯನವನ್ನು ನಡೆಸಿ, ಅದರ ವರದಿಯನ್ನು ತನಗೆ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠ ತಿಳಿಸಿದೆ. ಸಂಬಂಧಪಟ್ಟ ಕಾನೂನುಗಳಿಗೆ ಅನುಗುಣವಾಗಿ ನ್ಯಾಯಾಧೀಕರಣಗಳ ನೇಮಕಾತಿಯಾಗಬೇಕೆಂದು ಸುಪ್ರೀಂಕೋರ್ಟ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News