​ಮಂಗಳೂರು : ಬಸ್ ತಂಗುದಾಣದಲ್ಲಿ ಮೃತದೇಹ ಪತ್ತೆ

Update: 2019-11-15 15:59 GMT

ಮಂಗಳೂರು, ನ.15: ನಗರದ ಬಿಕರ್ನಕಟ್ಟೆ ಬಸ್ ತಂಗುದಾಣದಲ್ಲಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.

ನೀರುಮಾರ್ಗ ನಿವಾಸಿ ಕ್ಲೌಡ್ ಡಿಸೋಜ (65) ಮೃತಪಟ್ಟವರು.

ಶುಕ್ರವಾರ ನಗರಕ್ಕೆ ಆಗಮಿಸಿದ ಕ್ಲೌಡ್ ಅವರು ಬಿಕರ್ನಕಟ್ಟೆ ಬಳಿ ಅಸೌಖ್ಯಕ್ಕೀಡಾಗಿ ಬಿಕರ್ನಕಟ್ಟೆ ಬಸ್ ತಂಗುದಾಣದ ಬಳಿ ಮಲಗಿದ್ದರು. ಸ್ಥಳೀಯರು ಗಮನಿಸಿ ಕೂಡಲೇ ಅಂಬುಲೆನ್ಸ್‌, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಕ್ಲೌಡ್ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಈ ಕುರಿತು ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News