ಮಂಗಳೂರು : ವಿಶ್ವಾಸ್ ವೀನಸ್ ವಸತಿ ಸಮುಚ್ಚಯ ಉದ್ಘಾಟನೆ

Update: 2019-11-15 17:09 GMT

ಮಂಗಳೂರು, ನ. 15 : ಇಲ್ಲಿನ ಮಹಾಕಾಳಿಪಡ್ಪುವಿನಲ್ಲಿ ನಿರ್ಮಾಣವಾಗಿರುವ ವಿಶ್ವಾಸ್ ಬಾವಾ ಬಿಲ್ಡರ್ಸ್ ನ ನೂತನ ಯೋಜನೆ ವಿಶ್ವಾಸ್ ವೀನಸ್ ವಸತಿ ಸಮುಚ್ಚಯವನ್ನು ಹಿರಿಯ ಬಿಲ್ಡರ್ ಬಿ ಎಸ್ ರಾವ್ ಅವರು ಗುರುವಾರ ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ರಾವ್ ಅವರು ಇಂದು ಬಿಲ್ಡರ್ ಒಂದು ಯೋಜನೆ ಪೂರ್ಣಗೊಳಿಸುವಾಗ ಹಲವಾರು ಸವಾಲುಗಳನ್ನು ಎದುರಿಸಬೇಕಿದೆ. ಇಂತಹ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಫ್ಲ್ಯಾಟ್ ನಿರ್ಮಿಸಿಕೊಡುವ ಕೆಲವೇ ಕೆಲವು ಗುಣಮಟ್ಟದ ಬಿಲ್ಡರ್ ಗಳಲ್ಲಿ ಅಬ್ದುಲ್ ರವೂಫ್ ಪುತ್ತಿಗೆಯವರೂ ಒಬ್ಬರು ಎಂದು ಅಭಿನಂದಿಸಿದರು.

ಬಿಸಿಸಿಐ ಅಧ್ಯಕ್ಷ ಎಸ್ ಎಂ ರಶೀದ್ ಹಾಜಿ ಅವರು ಮಾತನಾಡಿ, ಅಬ್ದುಲ್ ರವೂಫ್ ಪುತ್ತಿಗೆಯವರು ಖ್ಯಾತ ಬಿಲ್ಡರ್ ಮಾತ್ರವಲ್ಲ, ಒಬ್ಬ ನಿಸ್ವಾರ್ಥ ಸಮಾಜ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುಣಮಟ್ಟದ ಫ್ಲ್ಯಾಟ್ ನಿರ್ಮಾಣದ ಜೊತೆಗೆ ತನ್ನ ಸಮಯ ಹಾಗು ಸಂಪನ್ಮೂಲವನ್ನು ಸಮಾಜ ಸುಧಾರಣೆಗೆ ಬಳಸುವ ಅಪರೂಪದ ಉದ್ಯಮಿ ಅವರು ಎಂದು ಹೇಳಿದರು.

ಪ್ಲಾಮಾ ಡೆವಲಪರ್ಸ್ ನ ಪಿ ಎಂ ಎ ರಝಾಕ್, ಗ್ಲೋಬ್ ಟ್ರಾವೆಲ್ಸ್ ನ ವಿಲಿಯಮ್ ಡಿಸೋಜ, ಪಿ ಅಬ್ದುಲ್ ರಶೀದ್ ಕುಲಶೇಖರ, ಬಾಲಕೃಷ್ಣ ಸನಿಲ್, ಪರ್ಸಿನ್ ಬೋಟ್ ಮಾಲಕರ ಸಂಘದ ಅಧ್ಯಕ್ಷ ಮೋಹನ್ ಬೆಂಗ್ರೆ, ಮಾಜಿ ಕಾರ್ಪೊರೇಟರ್ ರತಿಕಲಾ ಪ್ರಭಾಕರ್ ಮತ್ತಿತರರು ಶುಭ ಹಾರೈಸಿದರು.

ಸಂಸ್ಥೆಯ ಆಡಳಿತ ನಿರ್ದೇಶಕ ಅಬ್ದುಲ್ ರವೂಫ್ ಪುತ್ತಿಗೆಯವರು ಸ್ವಾಗತಿಸಿ, ಯೋಜನೆಯ ವಿವರಗಳನ್ನು ನೀಡಿದರು. ಮುಮ್ತಾಝ್ ಫರ್ವೇಝ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News